ಚಿತ್ರದುರ್ಗ ಲೋಕಸಭಾ ಕ್ಷೇತ್ರಕ್ಕೆ ಕಾಂಗ್ರೆಸ್ ಟಿಕೆಟ್‌ಗಾಗಿ ಡಿ. ಬಸವರಾಜ್ ಅರ್ಜಿ

ಚಿತ್ರದುರ್ಗ ಲೋಕಸಭಾ ಕ್ಷೇತ್ರಕ್ಕೆ ಕಾಂಗ್ರೆಸ್ ಟಿಕೆಟ್‌ಗಾಗಿ ಡಿ. ಬಸವರಾಜ್ ಅರ್ಜಿ

ದಾವಣಗೆರೆ, ಡಿ.17- ಚಿತ್ರದುರ್ಗ ಲೋಕಸಭಾ ಮೀಸಲು ಕ್ಷೇತ್ರಕ್ಕೆ ವೀಕ್ಷಕರಾಗಿ ನಿನ್ನೆ ಆಗಮಿಸಿದ್ದ ಸಮಾಜ ಕಲ್ಯಾಣ ಸಚಿವ ಹೆಚ್.ಸಿ. ಮಹಾದೇವಪ್ಪ ಅವರಿಗೆ ಕೆಪಿಸಿಸಿ ವಕ್ತಾರರು ಹಾಗೂ ರೇಷ್ಮೆ ನಿಗಮದ ಮಾಜಿ ಅಧ್ಯಕ್ಷ ಬಸವರಾಜ್ ಅವರು ತಮಗೆ ಚಿತ್ರದುರ್ಗ ಲೋಕಸಭಾ ಮೀಸಲು ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ನೀಡಬೇಕೆಂದು ಮನವಿ ಸಲ್ಲಿಸಿದರು.  ಕೆಪಿಸಿಸಿ ಕಾರ್ಯಾಧ್ಯಕ್ಷ ಬಿ.ಎನ್.ಚಂದ್ರಪ್ಪ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಕೆ.ತಾಜ್ ಪೀರ್, ಜಿಲ್ಲಾ ಕಾಂಗ್ರೆಸ್ ಕಾರ್ಯಾಧ್ಯಕ್ಷ ಹಾಲಸ್ವಾಮಿ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರುಗಳಾದ ಹರಪನಹಳ್ಳಿ ಎಂ.ವಿ.ಅಂಜಿನಪ್ಪ, ರಾಜು ಗೊಂಗಡಿ, ದಾದಾಪೀರ್ ಲಾಟಿ, ಟಿ.ವೀರೇಶ್, ಹೆಚ್.ತಿಪ್ಪೇಸ್ವಾಮಿ, ಟಿ.ಶಿವಕುಮಾರ್, ಬಿ.ಹೆಚ್. ಉದಯ್ ಕುಮಾರ್, ಡಿ.ಶಿವಕುಮಾರ್, ಗಿರಿಧರ್ ಸತಾಲ್, ಬಿ.ಎಸ್. ಸುರೇಶ್, ಮುಬಾರಕ್ ಸೇರಿದಂತೆ ಇತರರು ಡಿ. ಬಸವರಾಜ್ ಅವರೊಂದಿಗೆ ಹಾಜರಿದ್ದರು.

error: Content is protected !!