ಆತ್ಮಬಲದ ಪರೀಕ್ಷೆ…

ಅನಿವಾರ್ಯತೆ ಒಪ್ಪಿ
ಆತ್ಮಬಲ ಅಪ್ಪಿ
ಆತ್ಮವಿಶ್ವಾಸದ ಹೆಜ್ಜೆ ಇಟ್ಟು
ಸುರಕ್ಷಾ ಕ್ರಮ ಅನುಸರಿಸಿ
ನಿರ್ಭೀತಿಯಿಂದ ಯಶ ಸಾಧಿಸಿ
ಹೊಸ ಇತಿಹಾಸ ಬರೆದು
ನಿರ್ಮಿಸಿ ನಿಮ್ಮ ಬಾಳ ಪುಟದಿ
ನೂತನ ದಾಖಲೆ…
ನಿಮಗಿರಲಿ ರಕ್ಷಾ ಕವಚ
ಹೆತ್ತವರ ಅಕ್ಕರೆ ಗುರು ಕಟಾಕ್ಷ
ಭಗವತ್ಕೃಪೆಯ ಬೆಂಗಾವಲು.


 ಗಂಗಾಧರ ಬಿ ಎಲ್ ನಿಟ್ಟೂರ್
[email protected]

 

error: Content is protected !!