ಜೀವನ ಸಾರ…

ಇರುವುದನ್ನು ಸ್ವೀಕರಿಸು
ಬೇಡ ಇಲ್ಲದ ಲೋಭ;
ಅತಿ ಆಸೆಗಳ ಕಟ್ಟಿಹಾಕಿ
ಬಯಸದಿರು ನಮ್ಮದಲ್ಲದ ಲಾಭ!!

ಪ್ರತಿ ವೈಫಲ್ಯದಲ್ಲೂ ಉಂಟು
ಜೀವನದ ಬಹುದೊಡ್ಡ ಪಾಠ;
ಬೇಕು ಸೋಲಿನಲ್ಲೂ ಸಾರವ
ಹುಡುಕುವ ಪರಿಪಾಠ!!

ಅರಿಯಬೇಕಿದೆ ನಾವೆಲ್ಲ
ಸೋಲೇ ಗೆಲುವಿನ ಸೋಪಾನ;
ಅರಿತು ನಡೆಯಬೇಕು
ಸೋಲಿಗೆ ಔಷಧಿಯಲ್ಲ ಪಾನ!!

ಬೇಡ ಬೇಸರ, ಬೇಕಿಲ್ಲ
ಎಲ್ಲದಕು ಅವಸರ;
ಮೆಟ್ಟಿ ನಿಲ್ಲು ಹೊಡೆದೋಡಿಸಲು
ಕಷ್ಟಗಳೆಂಬ ಅಸುರ!!

ಸೋತರೇನಂತೆ, ಹುಡುಕಬೇಕು
ಗೆಲುವಿನ ರಹದಾರಿ;
ಇಹುದಲ್ಲವೇ ನಮಗೆ ನಮ್ಮ
ಜೀವನದ ಜವಾಬ್ದಾರಿ?

ದಿಟ್ಟ ಕನಸನ್ನು, ಗಟ್ಟಿ ಮನದಿ
ಕಾಣಬೇಕು ಮನುಜ;
ಹೋಗುವಾಗ ಗೆಲುವಿನ ಬೆಂಬತ್ತಿ
ಸೋಲು ಕೆಲವೊಮ್ಮೆ ಸಹಜ.


ಮಹಾಂತೇಶ ಮಾಗನೂರ, ಬೆಂಗಳೂರು.
9980022155
[email protected]

error: Content is protected !!