ಹುಟ್ಟುಹಬ್ಬದ ಶುಭಾಶಯಗಳು

ಜೀವನ ಆದರ್ಶಕ್ಕೆ ಆಡಂಬರಕ್ಕಲ್ಲ,
ಅರ್ಥಪೂರ್ಣ ಮಾಡುವುದಕ್ಕೆ ವ್ಯರ್ಥಮಾಡುವುದಕ್ಕಲ್ಲ
ಪ್ರೀತಿಸುವುದಕ್ಕೆ ದ್ವೇಷಿಸುವುದಕ್ಕಲ್ಲ
ಬಾಗಿಬದುಕುವುದಕ್ಕೆ ಬೀಗಿ ಹಾಳಾಗುವುದಕ್ಕಲ್ಲ
ಸಾರ್ಥಕತೆಗೆ ಸ್ವಾರ್ಥಕ್ಕಲ್ಲ ಹಾಗೂ ಆನಂದಕ್ಕೆ ತಲೆಭಾರಕ್ಕಲ್ಲ
ಎಂಬಂತೆ ನಡೆದು ಬಂದು 16 ಜೂನ್ 2020 ಇಂದು
90ನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿರುವ
ಡಾ|| ಶಾಮನೂರು ಶಿವಶಂಕರಪ್ಪನವರಿಗೆ
`ಹುಟ್ಟು ಹಬ್ಬದ ಶುಭಾಶಯ’
ಹೇಳಲು ಸಂಬಂಧಿಯಾಗಿ ನನಗೆ ಆನಂದ ಸಹಿತ ಅಭಿಮಾನವಿದೆ.
ಇವರು ದಾನಿಯಾಗಿ ಹೃದಯವಂತರಾಗಿದ್ದಾರೆ. ದಾಸೋಹಿಯಾಗಿ
ಶರಣರಾಗಿದ್ದಾರೆ. ಸಾರ್ವಜನಿಕ, ಶಿಕ್ಷಣ, ರಾಜಕೀಯ ಮತ್ತು
ಧಾರ್ಮಿಕ ಕ್ಷೇತ್ರಗಳಲ್ಲಿ ಮಾದರಿಯಾಗಿದ್ದಾರೆ.
ಇವರು ಘನವ್ಯಕ್ತಿ, ಶಕ್ತಿ ಮತ್ತು ಸಂಸ್ಥೆ, ಸಮಾಜದ ಒಳಿತಿಗಾಗಿ
ಶ್ರೀಯುತರು ಬಹುಕಾಲ ಆರೋಗ್ಯವಂತರಾಗಿ ಮತ್ತು
ಸೇವಾನಿರತರಾಗಿ ಬದುಕಲು
ಅವರಿಗೆ ಭಗವಂತನ ಕೃಪೆ ಇರಲಿ ಎಂದು ಹಾರೈಸುತ್ತೇನೆ.


ನ್ಯಾ|| ಶಿವರಾಜ ವಿ.ಪಾಟೀಲ
ವಿಶ್ರಾಂತ ನ್ಯಾಯಮೂರ್ತಿಗಳು, ಸರ್ವೋಚ್ಛ ನ್ಯಾಯಾಲಯ.

error: Content is protected !!