ಮುತ್ತಿಡುವ ಸತಿಯು ಬಂದಾಗ
ತುತ್ತಿಟ್ಟಂತಹ ತಾಯಿಯ ಆರೈಕೆ
ಪ್ರೀತಿಯನು ಮರೆಯಬಾರದು.
ಉದ್ಯೋಗ, ಆಸ್ತಿ, ಅಂತಸ್ತು ಸಿಕ್ಕಾಗ
ಉಪವಾಸವಿದ್ದು ದುಡಿದು ಸಾಕಿದ
ಅಪ್ಪನ ತ್ಯಾಗ ಮರೆಯಬಾರದು.
ನಾಲ್ಕಕ್ಷರ ಕಲಿತು ವಿದ್ಯಾವಂತರಾಗಿ
ನಾಲ್ಕಂಕೆಯ ಸಂಪಾದನೆಯ ಗಳಿಸಿದರು
ಶಿಕ್ಷಿತರಾಗಿಸಿದ ಶಿಕ್ಷಕರ ಮರೆಯಬಾರದು.
ತೇರೊಳಗಿನ ದೇವರ ನೆನೆಯುತ
ತೇರನೆಳೆದಂತಹ ಭಕ್ತರ ಭಕ್ತಿಯ
ಪರಾಕಾಷ್ಠೆಯನು ಮರೆಯಬಾರದು.
ಸಸಿಯ ಬೇರಿಗೆ ಜೀವಾಮೃತವನುಣಿಸಿ
ಹೆಮ್ಮರವಾಗಿಸಿದ ಎರೆಹುಳುಗಳ
ಪರಿಶ್ರಮವನು ಮರೆಯಬಾರದು.
ಶಿವಮೂರ್ತಿ.ಹೆಚ್., ಕನ್ನಡ ಶಿಕ್ಷಕರು
ಶ್ರೀ ತರಳಬಾಳು ಜಗದ್ಗುರು ರೆಸಿಡೆನ್ಸಿಯಲ್
ಸ್ಕೂಲ್, ಅನುಭವ ಮಂಟಪ, ದಾವಣಗೆರೆ.
9740050150
[email protected]