ರೈತರ ಫಸಲುಗಳ ಪರಿವರ್ತನ ಸಹಕಾರ ಸಂಘಕ್ಕೆ ಗೌಡರು ಅಧ್ಯಕ್ಷ

ರೈತರ ಫಸಲುಗಳ ಪರಿವರ್ತನ ಸಹಕಾರ ಸಂಘಕ್ಕೆ ಗೌಡರು ಅಧ್ಯಕ್ಷ - Janathavaniದಾವಣಗೆರೆ, ಡಿ.4- ನಗರದ ರೈತರ ಫಸಲುಗಳ ಪರಿವರ್ತನ ಮತ್ತು ವ್ಯಾಪಾರೋ ದ್ಯಮ ಸಹಕಾರ ಸಂಘದ ಅಧ್ಯಕ್ಷರಾಗಿ ಜಿ.ಎಸ್.ಪರಮೇಶ್ವರ ಗೌಡರು ಅವಿ ರೋಧವಾಗಿ ಆಯ್ಕೆಯಾಗಿದ್ದಾರೆ.

ಸಂಘದ ಅಧ್ಯಕ್ಷರಾಗಿದ್ದ ಶಾಮನೂರು ಕಲ್ಲೇಶಪ್ಪ ಅವರ ನಿಧನದಿಂದಾಗಿ ತೆರವಾದ   ಸ್ಥಾನಕ್ಕೆ ಸಂಘದ ಕಚೇರಿ ಸಭಾಂಗಣದಲ್ಲಿ ಇಂದು ನಡೆದ ಸಂಘದ ಆಡಳಿತ ಮಂಡಳಿ ಸಭೆಯಲ್ಲಿ ಈ ಆಯ್ಕೆ ನಡೆಯಿತು.

ಸಂಘದ ಉಪಾಧ್ಯಕ್ಷ ಬಿ.ಆರ್.ಸೋಮೇಶೇಖರಪ್ಪ, ನಿರ್ದೇಶಕರು ಗಳಾದ ಜಿ.ಸೋಮಶೇಖರಪ್ಪ, ಬಿ.ಜಿ.ನಾಗರಾಜ್, ಕೆ.ಜಿ.ವಾಮ ದೇವಪ್ಪ, ಎನ್.ಉಮಾಪತಿ, ಎಸ್.ನಂಜಪ್ಪ, ಟಿ.ಹೆಚ್.ಶಂಕರಪ್ಪ, ಬಿ.ನಾಗೇಂದ್ರಪ್ಪ, ಎಸ್.ಧನ್ಯಾನಾಯ್ಕ, ಶ್ರೀಮತಿ ಹೇಮಾವತಿ, ಶ್ರೀಮತಿ ಸವಿತಾ, ಆರ್.ಗಂಗಾಧರಪ್ಪ ಅವರುಗಳು ಸಭೆಯ ಕಾರ್ಯಕಲಾಪಗಳಲ್ಲಿ ಭಾಗವಹಿಸಿದ್ದರು.

ಶಾಮನೂರು ಕಲ್ಲೇಶಪ್ಪ ಅವರ ನಿಧನದಿಂದಾಗಿ ತೆರವಾಗಿದ್ದ ನಿರ್ದೇಶಕ ಸ್ಥಾನಕ್ಕೆ ಕಳೆದ ವಾರ ನಡೆದ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾಗಿದ್ದ ಕಲ್ಲೇಶಪ್ಪ ಅವರ ಪುತ್ರ ಎಸ್.ಕೆ.ಪವಿತ್ರ ಶಾಮನೂರು ಅವರೂ ಸಹ ಇಂದಿನ ಸಭೆಯಲ್ಲಿ ಉಪಸ್ಥಿತರಿದ್ದರು.

ಸಹಕಾರಿ ಸಂಘಗಳ ಸಹಾಯಕ ನಿಬಂಧಕರ ಕಚೇರಿಯ ಸಹಕಾರ ಅಭಿವೃದ್ಧಿ ಅಧಿಕಾರಿಯೂ ಆಗಿರುವ ಮಾರಾಟಾಧಿಕಾರಿ ಜಿ.ಎಸ್.ಸುರೇಂದ್ರ ಅವರು ಚುನಾವಣಾ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದರು. ಸಂಘದ ಕಾರ್ಯದರ್ಶಿ ಡಿ.ಎಸ್.ಜಾಧವ್ ಉಪಸ್ಥಿತರಿದ್ದರು.

error: Content is protected !!