ಶ್ರೀಗಂಧ ಬೆಳೆಗಾರರ ಸಂಘಕ್ಕೆ ಅಧ್ಯಕ್ಷರಾಗಿ ಭೀಮಣ್ಣ

ಹರಪನಹಳ್ಳಿ, ಡಿ.17- ಅಖಿಲ ಕರ್ನಾಟಕ ಶ್ರೀಗಂಧ ಮತ್ತು ವನ ಕೃಷಿ ಬೆಳೆಗಾರರ ಸಂಘದ ತಾಲ್ಲೂಕು ಅಧ್ಯಕ್ಷರಾಗಿ ಭೀಮಣ್ಣ ಆಯ್ಕೆಯಾಗಿದ್ದಾರೆ.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಶ್ರೀಗಂಧ ಮತ್ತು ವನ ಕೃಷಿ ಬೆಳೆಯ ಕುರಿತಂತೆ ನಿವೃತ್ತ ಐಎಎಸ್ ಅಧಿಕಾರಿ ಮತ್ತು ನೀತಿ ಆಯೋಗದ ಕಾರ್ಯದರ್ಶಿ ಹಾಗೂ ಅಖಿಲ ಕರ್ನಾಟಕ ಶ್ರೀಗಂಧ ಮತ್ತು ವನ ಕೃಷಿ ರಾಜ್ಯಾಧ್ಯಕ್ಷ ಅಮರನಾರಾಯಣ ಅವರ ನೇತೃತ್ವದಲ್ಲಿ ಆಯ್ಕೆ ಪ್ರಕ್ರಿಯೆ ನಡೆಯಿತು.

ಈ ವೇಳೇ ಮಾತನಾಡಿದ ಅವರು, ರೈತರಿಗೆ ಶ್ರೀಗಂಧದ ಬೆಳೆಯ ಬಗ್ಗೆ ಹಾಗೂ ಯಾವ ರೀತಿಯಲ್ಲಿ ರಕ್ಷಣೆ ಮಾಡಿಕೊಳ್ಳಬೇಕು ಮತ್ತು ಶ್ರೀಗಂಧ ಮರ ಕಳ್ಳತನ ಮಾಡುವವರಿಗೆ ಐಪಿಸಿ ಸೆಕ್ಷನ್ 80, 86, 87, 397 ಕಾಯ್ದೆ ಕುರಿತು ಹಾಗೂ ಅರಣ್ಯ ಕಾಯ್ದೆಯ ಅಡಿಯಲ್ಲಿ ಎಫ್.ಐ.ಆರ್‍ ದಾಖಲಿಸಿ ಅವರಿಗೆ ಜಾಮೀನು ರಹಿತ ಶಿಕ್ಷೆಯನ್ನು ವಿಧಿಸಿ ಅಂಥವರ ವಿರುದ್ಧ  ಕ್ರಮ ಕೈಗೊಳ್ಳಬೇಕೆಂದು ಹೇಳಿದರು. 

ಈ ಸಂದರ್ಭದಲ್ಲಿ  ಅಖಿಲ ಕರ್ನಾಟಕ ಶ್ರೀಗಂಧ ಮತ್ತು ವನ ಕೃಷಿ ಬೆಳೆಗಾರರ ಸಂಘದ ಕಾರ್ಯಾಧ್ಯಕ್ಷ ಎಸ್.ಈಶ್ವರಪ್ಪ, ರಾಜ್ಯ ಸಂಚಾಲಕ ವಿಶ್ವ ಕುಮಾರ್, ರಾಜ್ಯ ಪ್ರಧಾನ ಕಾರ್ಯದರ್ಶಿ ಲಕ್ಷ್ಮಿನಾರಾಯಣ ಸೇರಿದಂತೆ ಇತರರು ಇದ್ದರು.

error: Content is protected !!