ಅಂಬಾಭವಾನಿ ಬ್ಯಾಂಕ್‌ಗೆ ಎ. ಕಿರಣ್‌ಕುಮಾರ್‌ ಅಧ್ಯಕ್ಷ

ಅಂಬಾಭವಾನಿ ಬ್ಯಾಂಕ್‌ಗೆ ಎ. ಕಿರಣ್‌ಕುಮಾರ್‌ ಅಧ್ಯಕ್ಷ - Janathavaniಉಪಾಧ್ಯಕ್ಷರಾಗಿ ಜಿ.ಎಂ.ಪರಶುರಾಮ್‌ ರಾವ್

ದಾವಣಗೆರೆ, ಆ.5- ನಗರದ ಶ್ರೀ ಅಂಬಾಭವಾನಿ ಅರ್ಬನ್ ಕೋ ಆಪರೇಟಿವ್ ಬ್ಯಾಂಕ್‌ ಅಧ್ಯಕ್ಷರಾಗಿ ಹಿರಿಯ ಲೆಕ್ಕಪರಿಶೋಧಕ ಎ.ಕಿರಣ್‌ಕುಮಾರ್, ಉಪಾಧ್ಯಕ್ಷರಾಗಿ ಭರಣಿ ರೆಸ್ಟೋರೆಂಟ್ ಮಾಲೀಕ ಜಿ.ಎಂ.ಪರಶುರಾಮ್‌ ರಾವ್ ಆಯ್ಕೆಯಾಗಿದ್ದಾರೆ.

ಬ್ಯಾಂಕಿನ ಸಭಾಂಗಣದಲ್ಲಿ ಇಂದು ಸಂಜೆ ನಡೆದ ಬ್ಯಾಂಕಿನ ಆಡಳಿತ ಮಂಡಳಿಯ ಸಭೆಯಲ್ಲಿ ಈ ಆಯ್ಕೆ ಅವಿರೋಧವಾಗಿ ನಡೆಯಿತು.

ಅಧ್ಯಕ್ಷ ಸ್ಥಾನಕ್ಕೆ ಎ.ಕಿರಣ್‌ಕುಮಾರ್ ಅವರ ಹೆಸರನ್ನು ಬ್ಯಾಂಕಿನ ನಿರ್ದೇಶಕರೂ ಆಗಿರುವ ಮಹಾನಗರ ಪಾಲಿಕೆ ಮಾಜಿ ಉಪಮಹಾಪೌರ ಎಂ.ಎಸ್.ವಿಠ್ಠಲ್ ಅವರು ಸೂಚಿಸಿದಾಗ, ನಿರ್ದೇಶಕ ಆರ್.ಕೆ.ಆನಂದ್‌ರಾವ್ ಅನುಮೋದಿಸಿದರು.

ಉಪಾಧ್ಯಕ್ಷ ಸ್ಥಾನಕ್ಕೆ ಜಿ.ಎಂ.ಪರಶುರಾಮ್ರಾವ್ ಅವರ ಹೆಸರನ್ನು ನಿರ್ದೇಶಕ ವೆಂಕಟೇಶ್ ಕಾಟೆ ಸೂಚಿಸಿದಾಗ, ನಿರ್ದೇಶಕ ಎಲ್.ಅಣ್ಣೋಜಿರಾವ್ ಅನುಮೋದಿಸಿದರು.

ನಿರ್ದೇಶಕರುಗಳಾದ ಡಾ.ತಿಪ್ಪೇಸ್ವಾಮಿ ಏಕಬೋಟೆ, ಡಿ.ಮಾಲತೇಶ್‌ರಾವ್ ಜಾದವ್, ಮೋಹನ್ ಟಿ.ಏಕಬೋಟೆ, ಅಶೋಕ್‌ ರಾಯಬಾಗಿ, ಗೋಪಿನಾಥ್, ಬಾಬು, ಡಾ.ಎಸ್.ರಜಿನಿ, ಕು. ಎಂ.ಗೌರಾಬಾಯಿ, ಶ್ರೀಮತಿ ಗೀತಾ ಮೋಹನ್, ವೃತ್ತಿಪರ ನಿರ್ದೇಶಕರಾದ ಕೆ.ಎನ್.ಮಂಜೂಜೀರಾವ್, ರಾಜು ಮಹೇಂದ್ರಕರ್ ಅವರುಗಳು ಸಭೆಯ ಕಾರ್ಯ ಕಲಾಪಗಳಲ್ಲಿ ಪಾಲ್ಗೊಂಡಿದ್ದರು. ಸಹಕಾರ ಸಂಘಗಳ ಉಪ ನಿಬಂಧಕರ ಕಚೇರಿಯ ಆರ್.ರಮೇಶ್ ಅವರು ಚುನಾವಣಾ ಪ್ರಕ್ರಿಯೆ ನಡೆಸಿದರು. ಬ್ಯಾಂಕಿನ ವ್ಯವಸ್ಥಾಪಕ ನಾಗರಾಜ್ ಗೌಡನಕಟ್ಟಿ, ಸಹಾಯಕ ವ್ಯವಸ್ಥಾಪಕ ಅನಿಲ್ ಟಿ.ಮಾಳದಕರ್ ಅವರುಗಳು ಸಭೆಯ ಉಸ್ತುವಾರಿ ವಹಿಸಿದ್ದರು.

error: Content is protected !!