ಆರೋಗ್ಯ ರಕ್ಷಾ ಸಮಿತಿಗೆ ನೇಮಕ

ಆರೋಗ್ಯ ರಕ್ಷಾ ಸಮಿತಿಗೆ ನೇಮಕ - Janathavaniಮಲೇಬೆನ್ನೂರು, ಮಾ.21- ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದ ಆರೋಗ್ಯ ರಕ್ಷಾ ಸಮಿತಿಗೆ ಆರು ಜನರನ್ನು ನೇಮಕ ಮಾಡಲಾಗಿದೆ. ಪಾನಿಪೂರಿ ರಂಗನಾಥ್, ಜಿಗಳೇರ ಹಾಲೇಶಪ್ಪ, ಬೆಳಕೆರೆ ಮಂಜು ನಾಥ್, ಶಶಿಕಲಾ ಶಾಂತಕುಮಾರ್, ಎ.ಕೆ. ನಾಗ ರಾಜ್ ಮತ್ತು ಕೊಮಾರನಹಳ್ಳಿಯ ಐರಣಿ ಮೂರ್ತಿ ಅವರನ್ನು ಅಧಿಕಾರೇತರ ಸದಸ್ಯ ರನ್ನಾಗಿ ಸಂಸದ ಜಿ.ಎಂ. ಸಿದ್ದೇಶ್ವರ್, ಮಾಜಿ ಶಾಸಕ ಬಿ.ಪಿ. ಹರೀಶ್, ಜಿಲ್ಲಾ ಬಿಜೆಪಿ ಅಧ್ಯಕ್ಷ ಹನಗವಾಡಿ ವೀರೇಶ್, ಜಿ.ಪಂ. ಸದಸ್ಯ ಬಿ.ಎಂ. ವಾಗೀಶ್ ಸ್ವಾಮಿ ಶಿಫಾ ರಸ್ಸಿನ ಮೇರೆಗೆ ಸರ್ಕಾರ ನೇಮಕ ಮಾಡಿದೆ.

error: Content is protected !!