ಹರಿಹರ ತಾಲ್ಲೂಕು ಗಂಗಾಮತಸ್ಥ ಸಂಘಕ್ಕೆ ಅವಿರೋಧ ಆಯ್ಕೆ

ಹರಿಹರ ತಾಲ್ಲೂಕು ಗಂಗಾಮತಸ್ಥ ಸಂಘಕ್ಕೆ ಅವಿರೋಧ ಆಯ್ಕೆ - Janathavaniಹರಿಹರ, ಮಾ.18-  ಹರಿಹರ ತಾಲ್ಲೂಕು ಶ್ರೀ ಗಂಗಾಮತಸ್ಥ (ಬೆಸ್ತರ್) ಸಂಘದ ಪದಾಧಿಕಾರಿಗಳ ಆಯ್ಕೆ ಅವಿರೋಧವಾಗಿ ನಡೆದಿದೆ.

ಗುತ್ತೂರು ಶ್ರೀ ಅಂಬಿಗರ ಚೌಡಯ್ಯ ಸಮುದಾಯ ಭವನದಲ್ಲಿ ಸಂಘದ ಅಧ್ಯಕ್ಷ ಪೇಟೆ ಬಸಣ್ಣ ಅವರ ಅಧ್ಯಕ್ಷತೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು. ಗೌರವಾಧ್ಯಕ್ಷರಾಗಿ ನಾಗರಾಜಪ್ಪ ಗುಡದಳ್ಳಿ, ಅಧ್ಯಕ್ಷರಾಗಿ ಬಾರ್ಕಿ ಹೊನ್ನಪ್ಪ ಸಾರಥಿ, ಉಪಾಧ್ಯಕ್ಷರಾಗಿ ಗೌಡ್ರ ಮಂಜಪ್ಪ ಮಲೇಬೆನ್ನೂರು, ಪ್ರಧಾನ ಕಾರ್ಯದರ್ಶಿ ಐರಣಿ ಹನುಮಂತಪ್ಪ ಗುತ್ತೂರು, ಸಹ ಕಾರ್ಯದರ್ಶಿ ಮಂಜಪ್ಪ ಜಿಗಳಿ, ಖಜಾಂಚಿ ಕರಿಯಪ್ಪ ಪಿ. ನಿಟ್ಟೂರು ಹಾಗೂ ಉಳಿದ ಪದಾಧಿಕಾರಿಗಳನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.

ಈ ಸಂದರ್ಭದಲ್ಲಿ ದಾವಣಗೆರೆ ಜಿಲ್ಲಾ ಗಂಗಾಮತಸ್ಥ ಸಮಾಜದ ಅಧ್ಯಕ್ಷ ಮಾಗಾನಳ್ಳಿ ಮಂಜಪ್ಪ, ಹಿರಿಯರಾದ ಕುಂಬಳೂರು ಹಾಲಪ್ಪಜ್ಜ, ತಾಲ್ಲೂಕು ಮಾಜಿ ಅಧ್ಯಕ್ಷ ಅಂಗಡಿ ಹಾಲಪ್ಪ, ಮಾಜಿ ಗೌರವಾಧ್ಯಕ್ಷ ಕೆಂಚನಹಳ್ಳಿ ಮಾಂತೇಶಪ್ಪ ಹಾಗೂ ತಾಲ್ಲೂಕು ಗಂಗಾಮತಸ್ಥ ಬಾಂಧವರು ಹಾಜರಿದ್ದರು.

error: Content is protected !!