ಹರಪನಹಳ್ಳಿ ತಾ. ಭೋವಿ ಸಮಾಜದ ಅಧ್ಯಕ್ಷರಾಗಿ ಎಂ.ಬಿ. ಅಂಜಿನಪ್ಪ ಆಯ್ಕೆ

ಹರಪನಹಳ್ಳಿ, ಮೇ 4- ತಾಲ್ಲೂಕು ಭೋವಿ ಸಮಾಜದ ನೂತನ ಪದಾಧಿಕಾರಿಗಳ ಆಯ್ಕೆ ಮಾಡಲಾಗಿದ್ದು,  ಅಧ್ಯಕ್ಷರಾಗಿ ಕಂಚಿಕೇರಿ ಎಂ.ಬಿ. ಅಂಜಿನಪ್ಪ ಆಯ್ಕೆಯಾಗಿದ್ದಾರೆ.

ಗೌರವಾಧ್ಯಕ್ಷರಾಗಿ ಅರಸಿಕೇರಿ ವಿ. ತಿಮ್ಮೇಶ, ಪ್ರಧಾನ ಕಾರ್ಯದರ್ಶಿ ಕೂಲಹಳ್ಳಿ ವೆಂಕಟೇಶ್‌, ಖಜಾಂಚಿಯಾಗಿ ಪೃಥ್ಯೇಶ್ವರ ಪೂಜಾರ ನಾಗ ರಾಜ್‌, ಉಪಾಧ್ಯಕ್ಷರುಗಳಾಗಿ ಕೆರೆಗುಡಿಹಳ್ಳಿ ಶಿವಪ್ಪ, ಯು. ಬೇವಿನಹಳ್ಳಿ ಉಮಾಪತಿ, ನಂದಿಬೇವೂರು ಸಂಪತ್‌, ಚಿಗಟೇರಿ ಚಂದ್ರಶೇಖರ್‌ ಅಲಮ ರಸಿಕೇರಿ ಆಯ್ಕೆಯಾಗಿದ್ದಾರೆ. ಸಹ ಕಾರ್ಯದರ್ಶಿ ಬಿ. ಚಂದ್ರಶೇಖರ್, ಸಂಘಟನಾ ಕಾರ್ಯದರ್ಶಿ ನೀಲಗುಂದ ಬಿ. ತಿರುಪತಿ, ಸದಸ್ಯರುಗಳಾಗಿ ಪಿ. ಮಂಜನಾಥ, ಸಾವಿತ್ರಮ್ಮ, ರೇಣುಕಮ್ಮ, ದುರುಗಮ್ಮ ಆಯ್ಕೆಯಾಗಿದ್ದಾರೆ. 

ಉಚ್ಚಂಗಿದುರ್ಗದ ರಾಮಪ್ಪನವರ ಅಧ್ಯಕ್ಷತೆಯಲ್ಲಿ ಕಂಚಿಕೇರಿಯಲ್ಲಿ ಈ ಆಯ್ಕೆ  ಜರುಗಿತು. ಪುರಸಭಾ ಸದಸ್ಯ ಎಂ.ವಿ. ಅಂಜಿನಪ್ಪ. ಎಂ.ವಿ. ತಿಪ್ಪೇಶ್‌ ಇನ್ನಿತರರು ಹಾಜರಿದ್ದರು.

error: Content is protected !!