ಹಾಲು ಉತ್ಪಾದಕರ ಸಂಘಕ್ಕೆ ಆಯ್ಕೆ

ಚಳ್ಳಕೆರೆ, ಮಾ.7- ನರಹರಿ ನಗರದ ನರಹರಿ ಹಾಲು ಉತ್ಪಾದಕರ ಸಂಘದ ವತಿಯಿಂದ ನಡೆದ ಚುನಾವಣೆಯಲ್ಲಿ ಸಂಘದ ಅಧ್ಯಕ್ಷರಾಗಿ ಬಿ.ವಿ. ಸಂಜೀವಮೂರ್ತಿ, ಉಪಾಧ್ಯಕ್ಷರಾಗಿ ಓ. ತಿಪ್ಪೇಸ್ವಾಮಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಈ ಸಂದರ್ಭದಲ್ಲಿ ಸಂಘದ ನೂತನ ಸದಸ್ಯರಾದ ತುಕಾರಾಂ ರೆಡ್ಡಿ, ಪುಲ್ಲಾರೆಡ್ಡಿ, ಬಿ.ಆರ್. ಪುಷ್ಪ ಸಂಜೀವಮೂರ್ತಿ, ನಾಗರತ್ನಮ್ಮ, ಎನ್. ಲಕ್ಷ್ಮಣ್,  ಮಾರುತಿ, ಕಾರ್ತಿಕ್ ಎಸ್. ಮೂರ್ತಿ ಹಾಗೂ ಹಾಲು ಉತ್ಪಾದಕರ ಸಂಘದ ಕಾರ್ಯದರ್ಶಿ ಜಯಣ್ಣ ಹಾಜರಿದ್ದರು.

error: Content is protected !!