ಆರ್ಯವೈಶ್ಯ ಯುವಜನ ಮಹಾಸಭಾ ಪ್ರ.ಕಾರ್ಯದರ್ಶಿಯಾಗಿ ಎಸ್. ಸುನಿಲ್

ಆರ್ಯವೈಶ್ಯ ಯುವಜನ ಮಹಾಸಭಾ ಪ್ರ.ಕಾರ್ಯದರ್ಶಿಯಾಗಿ ಎಸ್. ಸುನಿಲ್ - Janathavaniನಿರ್ದೇಶಕರಾಗಿ ದರ್ಶನ್ ಎಸ್. ಕಾಸಲ್ ಅವಿರೋಧ ಆಯ್ಕೆ

ದಾವಣಗೆರೆ, ಏ.22- ಕರ್ನಾಟಕ ಆರ್ಯವೈಶ್ಯ ಯುವಜನ ಮಹಾಸಭಾ (ರಿ.), ಬೆಂಗಳೂರು ಇದರ 2021-2023ನೇ ಸಾಲಿನ ಅವಧಿಗೆ ದಾವಣಗೆರೆ ಎಸ್.ಕೆ.ಪಿ.ರಸ್ತೆ, ವಾಸವಿ ಯುವಜನ ಸಂಘದ ಸುನಿಲ್ ಎಸ್. ಪ್ರಧಾನ ಕಾರ್ಯದರ್ಶಿಯಾಗಿ ಹಾಗೂ ದರ್ಶನ್ ಎಸ್.ಕಾಸಲ್ ನಿರ್ದೇಶಕರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಬೆಂಗಳೂರಿನ ಮಾಗಡಿಯಲ್ಲಿ ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಯಾರೂ ನಾಮಪತ್ರ ಸಲ್ಲಿಸದ ಕಾರಣ ಅವಿರೋಧ ಆಯ್ಕೆಯಾಗಿದೆ ಎಂದು ಚುನಾವಣಾಧಿಕಾರಿಗಳು ತಿಳಿಸಿದ್ದಾರೆ.

ಪ್ರಸ್ತುತ ಸುನಿಲ್ ದಾವಣಗೆರೆ ಎಸ್.ಕೆ.ಪಿ.ರಸ್ತೆ ವಾಸವಿ ಯುವಜನ ಸಂಘದ ಸಂಘಟನಾ ಕಾರ್ಯದರ್ಶಿಯಾಗಿ ಹಾಗೂ ದರ್ಶನ್ ಎಸ್.ಕಾಸಲ್ ಸಹಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.

error: Content is protected !!