ಶ್ರೀ ಆಂಜನೇಯ ಸೌಹಾರ್ದ ಸಹಕಾರಿ ಅಧ್ಯಕ್ಷರಾಗಿ ಜಿ.ಎಂ. ರುದ್ರಗೌಡ್ರು

ಶ್ರೀ ಆಂಜನೇಯ ಸೌಹಾರ್ದ ಸಹಕಾರಿ ಅಧ್ಯಕ್ಷರಾಗಿ ಜಿ.ಎಂ. ರುದ್ರಗೌಡ್ರು - Janathavaniದಾವಣಗೆರೆ, ಫೆ.17- ತಾಲ್ಲೂಕಿನ ಕುಕ್ಕುವಾಡ ಗ್ರಾಮದ  ಆಂಜನೇಯ ಸೌಹಾರ್ದ ಸಹಕಾರಿಗೆ ನಿನ್ನೆ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಜಿ.ಎಂ. ರುದ್ರಗೌಡ್ರು ಹಾಗೂ ಉಪಾಧ್ಯಕ್ಷರಾಗಿ ಜಿ.ಆರ್. ಹರ್ಷ ಅವರುಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. 

ಈ ಸಂದರ್ಭದಲ್ಲಿ ನಿರ್ದೇಶಕರುಗಳಾದ  ಜಿ.ಎಸ್. ಶಿವಪ್ಪ, ಬಿ.ಹೆಚ್. ಶಿವನಗೌಡ, ಕೆ.ಟಿ. ಚಂದ್ರಶೇಖರಪ್ಪ, ಕೆ. ಶರಣಪ್ಪ, ಕೆ.ಎಂ. ಉಮೇಶ್, ಕರಿಬಸಪ್ಪ ಟಿ.ಎಂ., ಮಹೇಂದ್ರಪ್ಪ ಪಿ.ಎನ್., ಕೇದಾರಮೂರ್ತಿ ಕೆ.ಜಿ.,  ಮಹಮ್ಮದ್ ಕೆ.ಎ., ಶ್ರೀಮತಿ ಶೋಭ ಸಿ. ಮುದ್ದಳ್ಳಿ,  ಶ್ರೀಮತಿ ಮಂಜುಳ ಡಿ.ಎಂ., ವೆಂಕಟೇಶ್ ಬಿ., ಯೋಗೇಂದ್ರಪ್ಪ ಕೆ.ಜಿ  ಉಪಸ್ಥಿತರಿದ್ದರು. 

error: Content is protected !!