ಧರಣೇಂದ್ರಕುಮಾರ್‌ ಕುಮಾರ್‌ ಕುಷ್ಟಗಿ ಪುರಸಭೆಗೆ ನೇಮಕ

ಮಲೇಬೆನ್ನೂರು, ಫೆ. 16 – ಕರ್ತವ್ಯ ಲೋಪದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಅವರಿಂದ ಅಮಾನತ್ತುಗೊಂಡಿದ್ದ ಇಲ್ಲಿನ ಪುರಸಭೆ ಮುಖ್ಯಾಧಿಕಾರಿ ಡಿ.ಎನ್.ಧರಣೇಂದ್ರಕುಮಾರ್ ಅವರನ್ನು ಕುಷ್ಟಗಿ ಪುರಸಭೆಯಲ್ಲಿ ಖಾಲಿಯಿರುವ ಸಮುದಾಯ ಸಂಘಟನಾಧಿಕಾರಿ ಹುದ್ದೆಗೆ ಮಂಗಳವಾರ ನೇಮಕ ಮಾಡಲಾಗಿದೆ.

ದಾವಣಗೆರೆ ಜಿಲ್ಲಾಧಿಕಾರಿಗಳ ಅಮಾನತ್ತು ಆದೇಶವನ್ನು ರದ್ದು ಪಡಿಸಿರುವ ಪೌರಾಡಳಿತ ನಿರ್ದೇಶನಾಲಯಾದ ನಿರ್ದೇಶಕರಾದ ಬಿ.ವಿ. ಕಾವೇರಿ ಜಿಲ್ಲಾಧಿಕಾರಿಗಳು ಪ್ರಸ್ತಾಪಿಸಿರುವ ಕರ್ತವ್ಯ ಲೋಪಗಳ ಆಪಾದನೆಯ ಕುರಿತಂತೆ ತಕ್ಷಣದಿಂದ ಜಾರಿಗೆ ಬರುವಂತೆ ವಿಚಾರಣೆ ಕಾಯ್ದಿರಿಸಿ, ಸೇವೆಯಿಂದ  ಅಮಾನತ್ತುಗೊಳಿಸಿ, ಹುದ್ದೆಯ ಲೀವ್ ಅನ್ನು ಕುಷ್ಟಗಿ ಪುರಸಭೆಯಲ್ಲಿ ಖಾಲಿ ಇರುವ ಧರಣೇಂದ್ರಕುಮಾರ್ ಅವರ ಮೂಲ ಹುದ್ದೆಯಾದ ಸಮುದಾಯ ಸಂಘಟನಾಧಿಕಾರಿ ಹುದ್ದೆಗೆ ಬದಲಾಯಿಸಿದೆ.

error: Content is protected !!