ಸಿರಿಗೆರೆ : 88ರ ವೃದ್ಧೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ

ಸಿರಿಗೆರೆ, ಫೆ. 15- ಚಿಕ್ಕ ಎಮ್ಮಿಗನೂರು ಗ್ರಾಮದ ಸಾಮಾನ್ಯ ಮಹಿಳೆಗೆ ಮೀಸಲಿದ್ದ ಗ್ರಾಮ ಪಂಚಾಯ್ತಿ ಅಧ್ಯಕ್ಷ ಸ್ಥಾನಕ್ಕೆ 88 ವರ್ಷದ ದಾಕ್ಷಾಯಣಮ್ಮ ಆಯ್ಕೆಯಾಗಿದ್ದಾರೆ.

ಆಯ್ಕೆ ಬಳಿಕ ಸಿರಿಗೆರೆ ತರಳಬಾಳು ಜಗದ್ಗುರು ಬೃಹನ್ಮಠಕ್ಕೆ ಭೇಟಿ ನೀಡಿ, ಡಾ. ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಅವರ ಆಶೀರ್ವಾದ ಪಡೆದರು.

ಆ ಕಾಲದಲ್ಲೇ 8ನೇ ತರಗತಿ ಓದಿದ್ದು, ಇವರಿಗೆ ಕನ್ನಡ, ಇಂಗ್ಲಿಷ್ ಓದಲು ಬರೆಯಲು ಬರುತ್ತದೆ. ಶ್ರೀಗಳು ಈ ವಯಸ್ಸಿನಲ್ಲಿ ಅಧ್ಯಕ್ಷೆಯಾಗಿ ಏನು ಮಾಡುತ್ತೀರೆಂದು ಕೇಳಿದ್ದಕ್ಕೆ, ದಾಕ್ಷಾಯಣಮ್ಮ ಪ್ರತಿ ಕ್ರಿಯಿಸಿ, ಗ್ರಾಮಕ್ಕೆ ಕುಡಿವ ನೀರು, ಸ್ವಚ್ಛತೆ, ವಿದ್ಯುತ್ ದೀಪ, ರಸ್ತೆ, ಚರಂಡಿ ಸೌಲಭ್ಯ,  ಸೂರಿಲ್ಲದವರಿಗೆ ನಿವೇಶನ, ಮನೆ ಸೇರಿ ಅಗತ್ಯ ಸೌಕರ್ಯ ಕಲ್ಪಿಸಲು ಶ್ರಮಿಸುತ್ತೇನೆ. ಸರ್ಕಾರದ ವಿವಿಧ ಇಲಾಖೆಗಳ ಅನುದಾನ ಸದ್ಭಳಕೆ ಮಾಡಿಕೊಂಡು ಗ್ರಾಮವನ್ನು ಸಮಗ್ರವಾಗಿ ಅಭಿವೃದ್ಧಿಪಡಿಸುತ್ತೇನೆಂದು ಹೇಳಿದರು.

error: Content is protected !!