ಜಿಲ್ಲಾ ಕ.ದ.ಸಂ.ಸ. ಅಧ್ಯಕ್ಷರಾಗಿ ಹೆಚ್. ರಾಮಣ್ಣ

ದಾವಣಗೆರೆ, ಏ.14- ಕರ್ನಾಟಕ ದಲಿತ ಸಂಘರ್ಷ ಸಮಿತಿ  ಅಂಬೇಡ್ಕರ್ ಧ್ವನಿಗೆ ನೂತನ ಪದಾಧಿಕಾರಿಗಳನ್ನು ನೇಮಕ ಮಾಡಿರುವುದಾಗಿ ರಾಜ್ಯಾಧ್ಯಕ್ಷ ಸುರೇಶ್ ಕೆ.ರಾಯಪ್ಪಗೋಳ್ ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿಂದು ಮಾತನಾಡಿದ ಅವರು, ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಕೆ.ರವಿ ಅವರನ್ನು ನೇಮಕ ಮಾಡಿದ್ದು, ಜಿಲ್ಲಾಧ್ಯಕ್ಷರಾಗಿ ಹೆಚ್.ರಾಮಣ್ಣ, ಜಿಲ್ಲಾ ಕಾರ್ಯಾಧ್ಯಕ್ಷರಾಗಿ ಬಿ.ಜಿ. ರಾಘವೇಂದ್ರ, ಉಪಾಧ್ಯಕ್ಷರಾಗಿ ಎಂ.ಎನ್. ಮಂಜುನಾಥ್, ಕಾನೂನು ಸಲಹೆಗಾರರಾಗಿ ಚಂದ್ರಪ್ಪ ಹಲಗೇರಿ, ಪ್ರಧಾನ ಕಾರ್ಯದರ್ಶಿಗಳಾಗಿ ಜಯನಾಯ್ಕ, ಖಜಾಂಚಿಯಾಗಿ ಮಧು ಕುಮಾರ ಡಿ., ಕಾರ್ಯದರ್ಶಿಯಾಗಿ ಅಹ್ಮದ್, ಸಹಕಾರ್ಯದರ್ಶಿಯಾಗಿ ಆರೀಫ್, ಸಂಘಟನಾ ಸಂಚಾಲಕರಾಗಿ ಹೆಚ್.ಭೀಮಣ್ಣ, ಆರ್.ಜಗದೀಶ್ ಅವರನ್ನು ನೇಮಿಸಲಾಗಿದೆ ಎಂದು ತಿಳಿಸಿದರು. 

error: Content is protected !!