ಬಿಜೆಪಿ ತೆಕ್ಕೆಗೆ ರಾಗಿಮಸಲವಾಡ ಗ್ರಾ. ಪಂ. ಅಧ್ಯಕ್ಷರಾಗಿ ಶೇಖರಗೌಡ

ಹರಪನಹಳ್ಳಿ, ಫೆ.9- ತಾಲ್ಲೂಕಿನ ರಾಗಿಮಸಲವಾಡ ಗ್ರಾಮ ಪಂಚಾಯ್ತಿ ಅಧ್ಯಕ್ಷರಾಗಿ ಬಿಜೆಪಿ ಬೆಂಬಲಿತ ಜಿ.ಶೇಖರಗೌಡ, ಉಪಾಧ್ಯಕ್ಷರಾಗಿ ಮಮತಾಬಾಯಿ  ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ತೋಟಗಾರಿಕಾ ಸಹಾಯಕ ನಿರ್ದೆಶಕ ಜಯಸಿಂಹ ತಿಳಿಸಿದ್ದಾರೆ. ಸಹಾಯಕ ಚುನಾವಣಾಧಿಕಾರಿ ರವೀಂದ್ರ ಹಿರೇಮಠ, ಪಿಡಿಒ ಎಸ್.ಶ್ರೀನಿವಾಸ ಹಾಜರಿದ್ದರು.

ತೆಲಿಗಿ ಹೋಬಳಿಯ ಬಿಜೆಪಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಶಿರಗಾನಹಳ್ಳಿ ವಿಶ್ವನಾಥ ಅವರ ನೇತೃತ್ವದಲ್ಲಿ ಬಿಜೆಪಿ ಬೆಂಬಲಿಗರು ಜಯ ಗಳಿಸಿದರು. ಬಿಜೆಪಿ ತಾಲ್ಲೂಕು ಅಧ್ಯಕ್ಷ ಸತ್ತೂರು ಹಾಲೇಶ್‌, ಸಿದ್ದೇಶ್‌, ಜಯನಾಯ್ಕ, ಕೆ.ರೇವಣಸಿದ್ದಪ್ಪ, ಆನಂದರಾವ್, ಅಂಜಿನಪ್ಪ, ಮೂರ್ತಿನಾಯ್ಕ, ಕರೇಗೌಡ, ಸೋಮಪ್ಪ, ನಾಗರಾಜನಾಯ್ಕ, ಹೆಚ್.ಎಸ್.ಬಸವರಾಜಪ್ಪ ಹಾಜರಿದ್ದರು.

error: Content is protected !!