ಬಸವನಹಳ್ಳಿ ಪಂಚಾಯಿತಿ ಅಧ್ಯಕ್ಷರಾಗಿ ರತ್ನ, ಉಪಾಧ್ಯಕ್ಷರಾಗಿ ಚಂದ್ರಮ್ಮ ಆಯ್ಕೆ

ಹೊನ್ನಾಳಿ, ಫೆ.9- ನ್ಯಾಮತಿ ತಾಲ್ಲೂಕು ವ್ಯಾಪ್ತಿಯ ಬಸವನಹಳ್ಳಿ ಗ್ರಾಮ ಪಂಚಾಯಿತಿಯ ಅಧ್ಯಕ್ಷರಾಗಿ ಪಿ.ಆರ್.ರತ್ನ ರಮೇಶ್, ಉಪಾಧ್ಯಕ್ಷರಾಗಿ  ಚಂದ್ರಮ್ಮ ಅವರು ಇಂದು ನಡೆದ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆ ಯಾಗಿದ್ದಾರೆ ಎಂದು ಚುನಾವಣಾಧಿಕಾರಿ ವೀರಭದ್ರ ಸ್ವಾಮಿ ಘೋಷಿಸಿದ್ದಾರೆ.

ಪಂಚಾಯಿತಿ ಸದಸ್ಯರುಗಳಾದ ಹೆಚ್.ಎಸ್.ಹಳದಮ್ಮ, ಡಿ.ಹರೀಶ್, ಬಿ.ಜಿ.ರಾಜಶೇಖರಪ್ಪ, ಡಿ.ಮಲ್ಲಪ್ಪ,  ಎಚ್.ಡಿ.ಬಸವರಾಜಪ್ಪ, ಟಿ.ಎನ್.ಗೀತಾ,  ಆರ್.ಎಸ್.ರುದ್ರಪ್ಪ, ಸುಜಾತ, ಎಸ್.ಅಶ್ವಿನಿ, ಕೆಂಚಪ್ಪ ಕೆ.ಎಸ್.ಬಸವನಹಳ್ಳಿ ಹಾಗೂ ಮಾದನಬಾವಿ ಗ್ರಾಮಸ್ಥರು ಇದ್ದರು.

error: Content is protected !!