ಹರಪನಹಳ್ಳಿ ತಾ. ಕುರುಬ ಸಮಾಜದ ಅಧ್ಯಕ್ಷರಾಗಿ ಬಿ. ಗೋಣಿಬಸಪ್ಪ

ಹರಪನಹಳ್ಳಿ ತಾ. ಕುರುಬ ಸಮಾಜದ ಅಧ್ಯಕ್ಷರಾಗಿ ಬಿ. ಗೋಣಿಬಸಪ್ಪ - Janathavaniಹರಪನಹಳ್ಳಿ, ಏ.1- ತಾಲ್ಲೂಕಿನ ಕುರುಬ ಸಮಾಜದ  ಅಧ್ಯಕ್ಷರಾಗಿ  ಬಂಡ್ರಿ ಗ್ರಾಮದ  ನ್ಯಾಯವಾದಿ ಬಿ. ಗೋಣಿಬಸಪ್ಪ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. 

ವೈ.ಕೆ.ಬಿ. ದುರುಗಪ್ಪನವರ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಬಿ. ಗೋಣಿಬಸಪ್ಪ ಆಯ್ಕೆಯಾಗಿದ್ದು, ಗೌರವ ಅಧ್ಯಕ್ಷರಾಗಿ ಕಲ್ಲೇರ ಬಸವರಾಜ್‌, ಉಪಾಧ್ಯಕ್ಷರಾಗಿ ಬಿ. ವಸಂತಪ್ಪ, ಕಾರ್ಯದರ್ಶಿ ಪರಶುರಾಮ್, ಖಜಾಂಚಿ ಗೋಣಿಬಸಪ್ಪ ಹಾಗೂ ನಿರ್ದೇಶಕರಾಗಿ ಮುತ್ತಿಗಿ ಜಂಬಣ್ಣ ಸೇರಿದಂತೆ 22 ಸದಸ್ಯರನ್ನು  ಕಾರ್ಯಕಾರಿ ಮಂಡಳಿಗೆ ಆಯ್ಕೆ ಮಾಡಲಾಯಿತು.

ಜಿ.ಪಂ. ಸದಸ್ಯ ಹೆಚ್.ಬಿ. ಪರಶುರಾಮಪ್ಪ, ತಾ.ಪಂ. ಮಾಜಿ ಅಧ್ಯಕ್ಷ ಬೂದಾಳ್ ಮಂಜುನಾಥ, ಪುರಸಭೆ ಸದಸ್ಯರಾದ ಗಣೇಶ, ಭರತೇಶ, ಮುಖಂಡರಾದ ಅಲಮರಸಿಕೇರಿ ಪರುಶುರಾಮ, ಶೆಡ್ಡಿ ಆನಂದಪ್ಪ, ಕುಂಚೂರು ದೇವರಾಜ ಹಾಗು ಇನ್ನಿತರರಿದ್ದರು.

error: Content is protected !!