ಬಿಜೆಪಿ ದಕ್ಷಿಣ ರೈತ ಮೋರ್ಚಾ ಅಧ್ಯಕ್ಷರಾಗಿ ಮಂಜುನಾಥ್

ದಾವಣಗೆರೆ, ಜ.11 – ಬಿಜೆಪಿ ದಾವಣಗೆರೆ ದಕ್ಷಿಣ ರೈತ ಮೋರ್ಚಾ ಅಧ್ಯಕ್ಷರಾಗಿ ಎ.ಎಂ. ಮಂಜುನಾಥ್, ಪ್ರಧಾನ ಕಾರ್ಯದರ್ಶಿಗಳಾಗಿ ಶಿವಮೂರ್ತೆಪ್ಪ ಹೊಸಹಳ್ಳಿ, ಕೆ.ಬಿ. ಹನುಮಂತಪ್ಪ ಜರೀಕಟ್ಟೆ ನೇಮಕಗೊಂಡಿದ್ದಾರೆ.

ಉಪಾಧ್ಯಕ್ಷರುಗಳಾಗಿ ಜಿ.ಬಿ. ಪರಮೇಶ್ವರಪ್ಪ ಕುಕ್ಕುವಾಡ, ಡಿ.ಎಸ್. ದೇವರಾಜ್ ತುರ್ಚಗಟ್ಟ, ಕೆ.ಬಿ. ಮಲ್ಲಿಕಾರ್ಜುನ್ ಚಂದ್ರನಹಳ್ಳಿ, ಕೆ.ಎಸ್. ಮಲ್ಲಿಕಾರ್ಜುನ್ ಬಿಸಲೇರಿ, ಶಿವಮೂರ್ತೆಪ್ಪ ಕೆ. ಶಿರಮಗೊಂಡನಹಳ್ಳಿ, ಕಾರ್ಯದರ್ಶಿಗಳಾಗಿ ಯು.ಎಂ. ಶಿವಮೂರ್ತೆಪ್ಪ ಕೈದಾಳ್, ಸುರೇಶ್ ಹದಡಿ, ರಾಯಪ್ಪರ ಶಂಭುಲಿಂಗಪ್ಪ, ಎಸ್.ಎಂ. ಕೊಟ್ರೇಶ್ ಶಿರಮಗೊಂಡನಹಳ್ಳಿ, ಎಸ್. ಕರಿಬಸಪ್ಪ ಬೆಳವನೂರು. ಖಜಾಂಚಿಯಾಗಿ ಲಿಂಗರಾಜ್ ನಾಗನೂರು, ನಿರ್ದೇಶಕರುಗಳಾಗಿ ಚಂದ್ರಪ್ಪ ಹದಡಿ, ಪ್ರಭು ಹಳೇಬೆಳವನೂರು, ಬಿ. ಚಂದ್ರಪ್ಪ ಜವಳಘಟ್ಟ, ಕೆ.ಬಿ. ವೀರಭದ್ರಪ್ಪ ನಾಗರಸನಹಳ್ಳಿ, ಭಾಸ್ಕರಚಾರಿ ನಾಗರಸನಹಳ್ಳಿ, ವಿಜಯಕುಮಾರ್ ತರಳಬಾಳು ನಗರ, ಎಸ್.ಆರ್. ಈಶ್ವರಕುಮಾರ್ ಆಯ್ಕೆಗೊಂಡಿದ್ದಾರೆ ಎಂದು ಪಕ್ಷದ ದಕ್ಷಿಣ ಮಂಡಲದ ಅಧ್ಯಕ್ಷ ಆನಂದರಾವ್   ತಿಳಿಸಿದ್ದಾರೆ.

error: Content is protected !!