ಕಲಾಕುಂಚದ ಎಸ್.ಎಸ್. ಬಡಾವಣೆ ಶಾಖೆ ಅಧ್ಯಕ್ಷರಾಗಿ ಸುಜಾತ ಬಸವರಾಜ್

ದಾವಣಗೆರೆ, ಜ.11- ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯ ಡಿ.ಸಿ.ಎಂ.ಟೌನ್‍ಶಿಪ್ ಶಾಖೆ ಪ್ರಾರಂಭವಾಗಿದ್ದು, ಶ್ರೀಮತಿ ಸುಜಾತ ಬಸವರಾಜ್‌ ಶಾಖೆಯ ಅಧ್ಯಕ್ಷರಾಗಿ ಅವಿರೋಧವಾಗಿ ನೇಮಕಗೊಂಡಿದ್ದಾರೆ ಎಂದು ಕಲಾಕುಂಚದ ಅಧ್ಯಕ್ಷ ಕೆ.ಹೆಚ್.ಮಂಜುನಾಥ್ ತಿಳಿಸಿದ್ದಾರೆ.

ಸಂಸ್ಥೆಯ ಸಾಲಿಗ್ರಾಮ ಗಣೇಶ್ ಶೆಣೈ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಗೌರವ ಅಧ್ಯಕ್ಷರಾಗಿ ರೂಪಾ ಮಂಜುನಾಥ್, ಪ್ರಧಾನ ಕಾರ್ಯದರ್ಶಿಯಾಗಿ ಉಮಾ ಶಿವರಾಜ್, ಸಂಚಾಲಕರಾಗಿ ಸಾವಿತ್ರಿ ಜಗದೀಶ್, ಸಹ ಸಂಚಾಲಕರಾಗಿ ಮಂಜುಳಾ ಸುನೀಲ್ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು ಎಂದು ಕಲಾಕುಂಚ ಮಹಿಳಾ ವಿಭಾಗದ ಅಧ್ಯಕ್ಷರಾದ ಹೇಮಾ ಶಾಂತಪ್ಪ ಪೂಜಾರಿ ತಿಳಿಸಿದ್ದಾರೆ.

error: Content is protected !!