ಹಿರಿಯ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘ ರಚನೆ

ಹಿರಿಯ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘ ರಚನೆ - Janathavaniದಾವಣಗೆರೆ, ಜ.8- ಶ್ರೀ ಜಯದೇವ ವೃತ್ತದ ಬಳಿಯ ಕಾರಿಗನೂರು ಪರಮೇಶ್ವರಪ್ಪ ಕಾಂಪ್ಲೆಕ್ಸ್ ನಲ್ಲಿ ಹಿರಿಯ ಪತ್ರಕರ್ತರಾದ ಎಸ್.ಬಿ.ಜಿನದತ್ತ ಹಾಗೂ ಬಕ್ಕೇಶ್ ನಾಗನೂರು ಅವರುಗಳ ನೇತೃತ್ವ ದಲ್ಲಿ ನಡೆದ ಸಭೆಯಲ್ಲಿ ಜಿಲ್ಲಾ ಹಿರಿಯ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘವನ್ನು ಅಸ್ತಿತ್ವಕ್ಕೆ ತರಲಾಯಿತು.

ಅಧ್ಯಕ್ಷರಾಗಿ ಎಸ್.ಬಿ.ಜಿನದತ್ತ, ಉಪಾಧ್ಯಕ್ಷರು ಗಳಾಗಿ ಬಕ್ಕೇಶ್‌ ನಾಗನೂರು, ಎಸ್.ಪರಮೇಶ್ವರಪ್ಪ, ಕಾರ್ಯದರ್ಶಿಯಾಗಿ ಐ.ಗುರುಶಾಂತಪ್ಪ, ಸಹಕಾರ್ಯದರ್ಶಿಯಾಗಿ ಬಸವರಾಜ್‌ ಐರಣಿ, ಸಂಘಟನಾ ಕಾರ್ಯದರ್ಶಿ ಆರ್.ಎಸ್.ತಿಪ್ಪೇಸ್ವಾಮಿ ಅವರುಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ನಿರ್ದೇಶಕರುಗಳಾಗಿ ಎಂ.ಎಸ್.ಶಿವಶರಣಪ್ಪ, ಬಾಬು ದಾಮೋದರ್, ಸುಬ್ರಮಣ್ಯ ನಾಡಿಗ್ ಅವರುಗಳೂ ಸಹ ಅವಿರೋಧವಾಗಿ ಆಯ್ಕೆಯಾಗಿ ದ್ದಾರೆಂದು ಸಂಘದ ಕಾರ್ಯದರ್ಶಿ ಐ.ಗುರುಶಾಂತಪ್ಪ ತಿಳಿಸಿದ್ದಾರೆ.

error: Content is protected !!