ಹಾಡಹಗಲೇ ಸರಗಳ್ಳತನ

ದಿನಸಿ ಖರೀದಿಸಿ ಮನೆಯತ್ತ ಸಾಗುತ್ತಿದ್ದ ಮಹಿಳೆ

ದಾವಣಗೆರೆ, ಆ. 11- ಪಾದಚಾರಿ ಮಹಿಳೆಯೋರ್ವರ ಕೊರಳಲ್ಲಿದ್ದ ಸುಮಾರು ಎರಡು ಲಕ್ಷ ಮೌಲ್ಯದ ಬಂಗಾರದ ಸರವನ್ನು ಬೈಕ್ ನಲ್ಲಿ ಬಂದು ಇಬ್ಬರು ಕಳ್ಳರು ಅಪಹರಿಸಿ ಪರಾರಿಯಾಗಿರುವ ಘಟನೆ ನಗರದ ಬಡಾವಣೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇಂದು ಹಾಡಹಗಲೇ ನಡೆದಿದೆ.

ಪಿ.ಜೆ. ಬಡಾವಣೆ ಜೊಳ್ಳಿ ಕಾಂಪೌಂಡ್‌ ಮುದ್ದಳ್ಳಿ ತೋಟದ ಬಳಿ ವಾಸಿ ಲಕ್ಷ್ಮಿ ಅಳ್ಳೊಳ್ಳಿ ಇಂದು ಮಧ್ಯಾಹ್ನ 3-30ರ ಸುಮಾರಿಗೆ ಮುದ್ದಳ್ಳಿ ತೋಟದ ರಸ್ತೆಯಲ್ಲಿನ ಕಿರಾಣಿ ಅಂಗಡಿಯಲ್ಲಿ ದಿನಸಿ‌ ಸಾಮಾಗ್ರಿ ಗಳನ್ನು ಖರೀದಿಸಿ ವಾಪಸ್ ಮನೆಗೆ ನಡೆದುಕೊಂಡು ಹೋಗುತ್ತಿದ್ದರು. ಈ ವೇಳೆ ಎದುರಿಗೆ ಬೈಕ್ ನಲ್ಲಿ ಬಂದ ಇಬ್ಬರ ಪೈಕಿ ಹಿಂಬದಿ ಕುಳಿತಿದ್ದ ಕಳ್ಳನು ಏಕಾಏಕಿ ಕೊರಳಿಗೆ ಕೈ ಹಾಕಿ 1 ಲಕ್ಷದ 60 ಸಾವಿರ ಮೌಲ್ಯದ 40 ಗ್ರಾಂ ನ ಎರಡೆಳೆಯ ಮಾಂಗಲ್ಯ ಸರ ಹಾಗೂ 40  ಸಾವಿರ ಮೌಲ್ಯದ 10  ಗ್ರಾಂ ನ ಒಂದೆಳೆ ಸರ ಅಪಹರಿಸಿದ್ದಾರೆ.

error: Content is protected !!