ವಿದ್ಯುತ್ ಸ್ಪರ್ಶಿಸಿ ತರಗಾರನ ಸಾವು

ದಾವಣಗೆರೆ, ಡಿ.16- ಕೆಲಸ ಮಾಡುತ್ತಿದ್ದ ವೇಳೆ ವಿದ್ಯುತ್ ಸ್ಪರ್ಶಿಸಿ ತರಗಾರನೋರ್ವ ಮೃತಪಟ್ಟಿರುವ ಘಟನೆ ಮಲೇಬೆನ್ನೂರು ಪೊಲೀಸ್ ಠಾಣಾ ವ್ಯಾಪ್ತಿಯ ಹರಿಹರ ತಾಲ್ಲೂಕು ಭಾಸ್ಕರ್ ರಾವ್ ಕ್ಯಾಂಪ್ ನಲ್ಲಿ ಮಂಗಳವಾರ ನಡೆದಿದೆ. ಮಲೇಬೆನ್ನೂರಿನ ಇಂದಿರಾನಗರ ಸಾಧಿಕ್ ವುಲ್ಲಾ (38) ಮೃತನು. ತರಗಾರ ಕೆಲಸಕ್ಕಾಗಿ ಮನೆಯೊಂದಕ್ಕೆ ತೆರಳಿದ್ದಾಗ ಬೆಳಕು ಕಡಿಮೆ ಇದ್ದ ಕಾರಣ ಬೆಳಕಿಗಾಗಿ ಸ್ವಿಚ್ ಹಾಕಲು ಹೋಗಿದಾಗ ವಿದ್ಯುತ್ ಶಾಕ್ ಹೊಡೆದು ಮೃತಪಟ್ಟಿದ್ದಾನೆ.

error: Content is protected !!