ರೈಸ್‍ ಮಿಲ್ ಮಾಲೀಕ ಮಾಗನೂರು ಅನಿಮಿಷ ಗೌಡ ಆತ್ಮಹತ್ಯೆ

ರೈಸ್‍ ಮಿಲ್ ಮಾಲೀಕ ಮಾಗನೂರು ಅನಿಮಿಷ ಗೌಡ ಆತ್ಮಹತ್ಯೆ - Janathavaniದಾವಣಗೆರೆ,ಜು.21- ಹರಿಹರದ ಎಂ.ಬಿ. ರೈಸ್ ಮಿಲ್ ಮಾಲೀಕ ಮಾಗನೂರು ಅನಿಮಿಷ ಗೌಡ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ವಿಷ ಸೇವಿಸಿದ್ದ ಅವರನ್ನು ಚಿಕಿತ್ಸೆಗಾಗಿ ಇಲ್ಲಿನ ಎಸ್.ಎಸ್.ಹೈಟೆಕ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಇಂದು ಮೃತಪಟ್ಟಿದ್ದಾರೆ. ರೈತರಿಂದ ಭತ್ತ ಖರೀದಿ ಮಾಡಿ ಉಳಿಸಿಕೊಂಡಿದ್ದ ಬಾಕಿ ಹಣ ಪಾವತಿಸುವಲ್ಲಿ ವಿಳಂಬವಾಗಿತ್ತು ಎನ್ನಲಾಗಿದೆ. ಹಣಕಾಸಿನ ವಿಚಾರದಲ್ಲಿ ಆದ ಜಿಗುಪ್ಸೆ ಅನಿಮಿಷ ಗೌಡ ಆತ್ಮಹತ್ಯೆ ಮಾಡಿಕೊಳ್ಳಲು ಕಾರಣ ಎಂದು ಅವರ ಪತ್ನಿ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಪಟ್ಟಂತೆ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಮೊಕ್ದದ್ದಮೆ ದಾಖಲಾಗಿದೆ.

error: Content is protected !!