ಲಾರಿ ಹರಿದು ಹಮಾಲಿ ಸಾವು

ದಾವಣಗೆರೆ, ಅ.6- ಲಾರಿ ಹರಿದ ಪರಿಣಾಮ ಹಮಾಲಿಯೋರ್ವ ಸ್ಥಳದಲ್ಲೇ ಸಾವಿಗೀಡಾಗಿರುವ ಘಟನೆ  ನಗರದ ಪಿ.ಬಿ. ರಸ್ತೆಯ ರವಿ ಮಿಲ್ ಬಳಿ ಇಂದು ಬೆಳಿಗ್ಗೆ ನಡೆದಿದೆ.

ಪಾಮೇನಹಳ್ಳಿಯ ಪ್ರಕಾಶ್ (45) ಮೃತ ದುರ್ದೈವಿ. ಮೃತನು ತನ್ನ ಸ್ನೇಹಿತನೊಂದಿಗೆ ನಡೆದುಕೊಂಡು ಹೋಗುತ್ತಿದ್ದರು. ಮಿಲ್ ಕಡೆ ಸಾಗುತ್ತಿದ್ದ ಸಿಮೆಂಟ್ ಲಾರಿಯನ್ನು ಚಾಲಕ ಗುಂಡಿ ಹಾದು ಹೋಗುವಾಗ ವೇಗವಾಗಿ ಮುಂದೆ ಚಲಿಸಿದ ಪರಿಣಾಮ ಅಲ್ಲೇ ಸಾಗುತ್ತಿದ್ದ ಪ್ರಕಾಶ್ ನಿಗೆ ಡಿಕ್ಕಿ ಪಡಿಸಿದ್ದಲ್ಲದೇ ಆತನ ಮೇಲೆ ಹರಿದಿದೆ. ಪ್ರಕಾಶ್ ಸ್ನೇಹಿತ ಪ್ರಾಣಾಪಾಯದಿಂದ ಪಾರಾಗಿದ್ದಾನೆ.  

ಘಟನೆಯಿಂದ ಹೆದರಿದ ಚಾಲಕನು ಲಾರಿಯನ್ನು ಬಿಟ್ಟು ಪರಾರಿಯಾಗಿದ್ದಾನೆ. ಈ ಸಂಬಂಧ ಉತ್ತರ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

error: Content is protected !!