ಬೈಕ್ ಕೊಡಿಸಲಿಲ್ಲವೆಂದು ವಿದ್ಯಾರ್ಥಿ ಆತ್ಮಹತ್ಯೆ

ದಾವಣಗೆರೆ, ಜೂ.9- ತಾನು ಕೇಳಿದ ಹೊಸ ಬೈಕ್  ಕೊಡಿಸಲಿಲ್ಲ ಎಂಬ ಸಣ್ಣ ಕಾರಣದಿಂದ    ವಿದ್ಯಾರ್ಥಿಯೋರ್ವ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಇಲ್ಲಿನ ಕೆಟಿಜೆ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಅಂಬಿಕಾ ನಗರ ಬಿ ಬ್ಲಾಕ್ ನಲ್ಲಿ ನಡೆದಿದೆ.

ಮಂಜುನಾಥ (20) ಆತ್ಮಹತ್ಯೆ ಮಾಡಿಕೊಂಡ ಸಿವಿಲ್ ಇಂಜಿನಿಯರ್ ಡಿಪ್ಲೋಮಾ ವಿದ್ಯಾರ್ಥಿಯಾಗಿದ್ದು, ಈತ ಇಲ್ಲಿನ ಗ್ರಾಮಾಂತರ ಪೊಲೀಸ್ ಠಾಣೆಯ  ಮುಖ್ಯಪೇದೆ ದೇವೇಂದ್ರಪ್ಪ ಅವರ ಮಗ ಎನ್ನಲಾಗಿದೆ.

ಈತನಿಗೆ ಆಗಲೇ ಹೊಸ ರಾಯಲ್ ಎನ್ ಫೀಲ್ಡ್ ಬುಲೆಟ್ ಬೈಕ್ ಕೊಡಿಸಲಾಗಿತ್ತಾದರೂ ಸಹ ತನಗೆ ಆರ್ ಎಕ್ಸ್-100 ಬೈಕ್ ಕೊಡಿಸುವಂತೆ ಕೇಳಿದ್ದ. ಇದಕ್ಕೆ ಅವರ ತಂದೆಯೂ ಸಹ ಕೊಡಿಸುವುದಾಗಿ ಹೇಳಿ ಒಂದು ವಾರ ತಾಳುವಂತೆ ಹೇಳಿದ್ದರು ಎಂದು ಹೇಳಲಾಗುತ್ತಿದೆ.

ಆದರೂ ಮಂಜುನಾಥ ಬೇಸರಗೊಂಡು ನಿನ್ನೆ ರಾತ್ರಿ ಊಟ ಸಹ ಮಾಡದೇ ಮೊದಲ ಮಹಡಿಯಲ್ಲಿನ ಮನೆಗೆ ಮಲಗು ವುದಾಗಿ ಹೋಗಿ ಸೀರೆಯಿಂದ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿದು ಬಂದಿದೆ.

error: Content is protected !!