ಪಡಿತರ ಅಕ್ಕಿ ಅಕ್ರಮ ಸಾಗಾಟ : ಅಕ್ಕಿ ವಶ

ದಾವಣಗೆರೆ, ಜೂ.8- ಪಡಿತರ ಅಕ್ಕಿ ಅಕ್ರಮ ಸಾಗಾಟದ ವೇಳೆ ದಾಳಿ ನಡೆಸಿರುವ ಆಹಾರ ನಿರೀಕ್ಷಕರು ಮತ್ತು ಬಸವಾಪಟ್ಟಣದ ಪೊಲೀಸರು ಸುಮಾರು 13 ಸಾವಿರ ಮೌಲ್ಯದ ಒಟ್ಟು 1300 ಕೆ.ಜಿ.ಯ 26 ಅಕ್ಕಿ ಚೀಲಗಳು ಮತ್ತು ವಾಹನವನ್ನು ವಶಪಡಿಸಿಕೊಂಡಿದ್ದಾರೆ.                  

ವಾಹನ ಚಾಲಕ ಚನ್ನಗಿರಿ ತಾಲ್ಲೂಕು ಕೆರೆಬಿಳಚಿ ಗ್ರಾಮದ ವ್ಯಾಪಾರಿ ಸಲೀಂ ನನ್ನು ಬಂಧಿಸ ಲಾಗಿದೆ. ಕೆರೆಬಿಳಿಚಿಯಿಂದ ಸಾಗರ ಪೇಟೆ  ಕಡೆಗೆ ವಾಹನದಲ್ಲಿ ಪಡಿತರ ಅಕ್ಕಿಯನ್ನು ಸಾಗಿಸುತ್ತಿದ್ದಾಗ ಚನ್ನಗಿರಿ ತಾಲ್ಲೂಕು ಕಛೇರಿ ಆಹಾರ ನಿರೀಕ್ಷಕ ಜಿ.ವೈ. ರವಿ ಕುಮಾರ್, ಪಿಎಸ್ಐ ಭಾರತಿ ಕಂಕಣವಾಡಿ ಮತ್ತು ಸಿಬ್ಬಂದಿಗಳು ದಾಳಿ ಮಾಡಿದ್ದು, ಈ ವೇಳೆ ವಾಹನ ಬಿಟ್ಟು ಚಾಲಕ ಓಡಿ ಹೋಗಲು ಪ್ರಯತ್ನಿಸಿ ಸಿಕ್ಕಿಬಿದ್ದಿದ್ದಾನೆ.

error: Content is protected !!