ದಾವಣಗೆರೆ, ಜೂ.1- ಬೈಕ್ ಅಪಘಾತ ದಿಂದ ಹಿರಿಯ ಮಗಳನ್ನು ನೋಡಲು ಹೋಗುತ್ತಿದ್ದ ತಾಯಿ ಮೃತಪಟ್ಟಿರುವ ಘಟನೆ ಚನ್ನಗಿರಿ ತಾಲ್ಲೂಕು ಸಂತೆಬೆನ್ನೂರು ಪೊಲೀಸ್ ಠಾಣಾ ವ್ಯಾಪ್ತಿಯ ಅಶೋಕ ನಗರ ಕ್ಯಾಂಪ್ ಸಮೀಪದಲ್ಲಿ ನಡೆದಿದೆ. ಜೋಳ ದಾಳ್ ಗ್ರಾಮದ ಕೆಂಚಮ್ಮ ಮೃತ ದುರ್ದೈವಿ. ಮಗಳನ್ನು ನೋಡಿಕೊಂಡು ಬರಲು ತಾಲ್ಲೂಕಿನ ಗೋಪನಾಳ್ ಗ್ರಾಮಕ್ಕೆ ಶನಿವಾರ ಬೆಳಿಗ್ಗೆ ಸಂಬಂಧಿ ಮಧು ಎಂಬಾತನೊಂದಿಗೆ ಬೈಕ್ ನಲ್ಲಿ ಹೋಗುತ್ತಿದ್ದರು. ಅಜಾಗರೂಕತೆ ಚಾಲನೆ ಪರಿಣಾಮ ಹಿಂಬದಿ ಸವಾರಿ ಮಾಡುತ್ತಿದ್ದ ಕೆಂಚಮ್ಮ ಬೈಕ್ ಮೇಲಿಂದ ಹಿಡಿತ ತಪ್ಪಿ ಕೆಳಗಡೆ ಬಿದ್ದು ಮೃತಪಟ್ಟಿದ್ದಾರೆ.
July 23, 2024