3.5 ಲಕ್ಷಕ್ಕೂ ಅಧಿಕ ಮೌಲ್ಯದ ಸ್ಫೋಟಕ ವಸ್ತುಗಳ ಜಪ್ತಿ

ದಾವಣಗೆರೆ, ಮಾ.21- ಗೋದಾಮಿನಲ್ಲಿ ಅಕ್ರಮವಾಗಿ ಸಂಗ್ರಹಿಸಿದ್ದ 3 ಲಕ್ಷದ 62 ಸಾವಿರ ರೂ. ಮೌಲ್ಯದ ಸ್ಫೋಟಕ ವಸ್ತುಗಳು ಸೇರಿದಂತೆ ಒಂದು ವಾಹನ, ಎರಡು ದ್ವಿಚಕ್ರ ವಾಹನಗಳನ್ನು ಇಲ್ಲಿನ ಗ್ರಾಮಾಂತರ ಪೊಲೀಸರು ಇಂದು ಜಪ್ತಿ ಮಾಡಿ ನಾಲ್ವರನ್ನು ಬಂಧಿಸಿದ್ದಾರೆ. ಬಿ.ಎಸ್. ವಿಕ್ರಮ್, ಕೆ. ನಾಗರಾಜ್, ವಿಜಯಕುಮಾರ್‌, ಮಂಜುನಾಥ ಬಂಧಿತರು.

ಕಾಡಜ್ಜಿ ಷಣ್ಮುಖಪ್ಪಗೆ ಸೇರಿದ ದುರ್ಗಾದೇವಿ ಎಕ್ಸ್‌ಪ್ಲೋಸಿವ್ ಮ್ಯಾಗ್‌ಜಿನ್‌ನ ಬಳಿಯಿರುವ ಗೋದಾಮಿನ ಒಳಗಡೆ ಮತ್ತು ಮುಂಭಾಗದಲ್ಲಿ ಸ್ಫೋಟಕ ವಸ್ತುಗ ಳನ್ನು ಅಕ್ರಮವಾಗಿ ಸಂಗ್ರಹಿಸಲಾ ಗಿತ್ತು. ಅಲ್ಲದೇ ಬೊಲೆರೋ ವಾಹನದಲ್ಲಿ ಸಾಗಾಟ ಮಾಡಲು ಮುಂದಾಗಿದ್ದಾಗ, ಗ್ರಾಮಾಂತರ ಡಿವೈಎಸ್ಪಿ ನರಸಿಂಹ ವಿ. ತಾಮ್ರಧ್ವಜ ನೇತೃತ್ವದಲ್ಲಿ ಪಿಎಸ್ಐ ಎಸ್. ಪುಷ್ಪಲತಾ, ಆಂಟಿ ಸಬೋಟೇಜ್ ಚೆಕ್ ಟೀಮ್ ಮತ್ತು ಎಎಸ್ಐ ಗುರುಶಾಂತಯ್ಯ, ಸಿಬ್ಬಂದಿಗಳಾದ ವೀರಭದ್ರಪ್ಪ, ದೇವೇಂದ್ರನಾಯ್ಕ, ನಾಗರಾಜಯ್ಯ, ಜಿ.ಎಲ್. ಮಂಜುನಾಥ, ಮಂಜನಗೌಡ, ನಾಗರಾಜ ಲಂಬಾಣಿ, ಅರುಣ್‌ಕುಮಾರ್ ಕುರುಬರ, ಹನುಮಂತಪ್ಪ ಒಳಗೊಂಡ ತಂಡ ದಾಳಿ ನಡೆಸಿದೆ.

ಅಕ್ರಮವಾಗಿ ಸಂಗ್ರಹಿಸಿದ್ದ ಗೋಡಾನ್ ಮಾಲೀಕ ಷಣ್ಮುಖಪ್ಪ, ಮುಜೀಬ್ ವಿರುದ್ಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

error: Content is protected !!