ಹೆರಿಗೆಗಾಗಿ ಬಂದಿದ್ದ ತಾಯಿ ಜೊತೆ ಮಗು ಸಾವು : ಪ್ರತಿಭಟನೆ

ಹೆರಿಗೆಗಾಗಿ ಬಂದಿದ್ದ ತಾಯಿ ಜೊತೆ ಮಗು ಸಾವು : ಪ್ರತಿಭಟನೆ - Janathavaniದಾವಣಗೆರೆ, ಮಾ.15- ಹೆರಿಗೆಗಾಗಿ ಬಂದಿದ್ದ ತಾಯಿ ಜೊತೆಗೆ ಗರ್ಭದಲ್ಲಿಯೇ ಮಗು ಸಾವನ್ನಪ್ಪಿದ್ದು, ಇದಕ್ಕೆ ವೈದ್ಯರ ನಿರ್ಲಕ್ಷವೇ ಕಾರಣ ಎಂದು ಆರೋಪಿಸಿ, ನಗರದ ಜಿಲ್ಲಾಸ್ಪತ್ರೆಯ ಆವರಣದಲ್ಲಿ ಮೃತ ಮಹಿಳೆ ಸಂಬಂಧಿಕರು ಪ್ರತಿಭಟನೆ ನಡೆಸಿದರು.

ಹರಪನಹಳ್ಳಿ ತಾಲ್ಲೂಕಿನ ನಿಲವಂಜಿಯ ಕಾವ್ಯ (21) ಸಾವನ್ನಪ್ಪಿದ ಮಹಿಳೆ. ಭಾನುವಾರ ತಡರಾತ್ರಿ ಹೆರಿಗೆಗಾಗಿ ಕಾವ್ಯ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ, ಗರ್ಭದಲ್ಲಿಯೇ ಮಗು ಸಾವನ್ನಪ್ಪಿದ್ದು, ಜೊತೆಗೆ ತಾಯಿ ಕಾವ್ಯ ಸಹ ಸಾವನ್ನಪ್ಪಿದ್ದು, ಇದಕ್ಕೆ ವೈದ್ಯರ ನಿರ್ಲಕ್ಷ್ಯವೇ ಕಾರಣವೆಂದು ಆರೋಪಿಸಿ ಮೃತಳ ಸಂಬಂಧಿಕರು ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಆಸ್ಪತ್ರೆ ಆವರಣದಲ್ಲಿ ಬಿಗುವಿನ ವಾತಾವರಣ ಉಂಟಾಗಿತ್ತು. ಸ್ಥಳಕ್ಕೆ ಬಡಾವಣೆ ಠಾಣೆ ಪೊಲೀಸರು ಆಗಮಿಸಿ ವಾತಾವರಣ ತಿಳಿಗೊಳಿಸಲು ಪ್ರಯತ್ನಿಸಿದರು.

error: Content is protected !!