ಶಾಸಕರ ಪ್ಲಾಂಟ್‌ನಲ್ಲಿದ್ದ ಗಂಧದ ಮರ ಕಳ್ಳತನ

ಶಾಸಕರ ಪ್ಲಾಂಟ್‌ನಲ್ಲಿದ್ದ ಗಂಧದ ಮರ ಕಳ್ಳತನ - Janathavaniದಾವಣಗೆರೆ, ಮಾ.14- ಚನ್ನಗಿರಿ ಶಾಸಕರ ಮನೆ ಅಂಗಳದಲ್ಲಿನ ಪ್ಲಾಂಟ್ ನಲ್ಲೇ ಗಂಧದ ಮರಗಳನ್ನು ಖದೀಮರು ಕಳ್ಳತನ ಮಾಡಿರುವ ಘಟನೆ ನಡೆದಿದೆ. 

ಚನ್ನಗಿರಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರ ಮನೆ ಅಂಗಳದ ಪ್ಲಾಂಟ್ ನಲ್ಲಿದ್ದ ಎಂಟು ಗಂಧದ  ಮರಗಳನ್ನು ಕಳ್ಳರು ಕತ್ತರಿಸಿ ಕೊಂಡು ಪರಾರಿಯಾಗಿದ್ದು, ಇನ್ನು ಕೆಲವು ಮರಗಳಿಗೆ ಕಳ್ಳರು ಕೊಡಲಿ ಹಾಕಿರುವುದು ಬೆಳಕಿಗೆ ಬಂದಿದೆ. ಶಾಸಕರು ತಮ್ಮ ಮನೆ ಅಂಗಳದ ಪಕ್ಕದ 2 ಎಕರೆ ಪ್ರದೇಶದಲ್ಲಿ ಗಂಧ, ತೇಗದ ವನ ಬೆಳೆಸಿ ದ್ದು, ಕಳೆದ 10 ವರ್ಷಗಳಿಂದ ಪ್ಲಾಂಟ್ ಮಾಡಿ ದ್ದನ್ನು ಗಮನಿಸಿರುವ ಖದೀ ಮರು ಗಂಧದ ಮರಗಳಿಗೆ ಕೊಡಲಿ ಹಾಕುವ ಮೂಲಕ ಗಂಧ ವನ್ನು ಹೊತ್ತೊಯ್ದಿದ್ದಾರೆ. ಇನ್ನು ಶಾಸಕರ ಪ್ಲಾಂಟ್ ನಲ್ಲಿ ಇದು 4ನೇ ಬಾರಿ ಕಳ್ಳತನ ನಡೆದಿರುವುದು ಎಂದು ತಿಳಿದುಬಂದಿದೆ. ಘಟನಾ ಸ್ಥಳಕ್ಕೆ ಶ್ವಾನದಳ, ಚನ್ನಗಿರಿ ಪೊಲೀಸ್, ಅರಣ್ಯ ಇಲಾಖೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

error: Content is protected !!