ನೆಲಮಂಗಲ ಸಾರಿಗೆ ಇಲಾಖೆ ಜೀಪ್‌ ಚಾಲಕನ ಕಿರುಕುಳ

ದಾವಣಗೆರೆ, ಮಾ.4- ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ಸಾರಿಗೆ ಕಚೇರಿಯ ಜೀಪ್‌ ಚಾಲಕ ನಾಗಪ್ಪನ ವಿರುದ್ಧ ಸಾಕಷ್ಟು ದೂರುಗಳಿದ್ದು, ಈತನು ಸಾರಿಗೆ ವಾಹನಗಳ ಚಾಲಕರಿಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿ, ಕಿರುಕುಳ ನೀಡುತ್ತಿದ್ದಾರೆ ಎಂದು ದಾವಣಗೆರೆ ಜಿಲ್ಲಾ ಲಾರಿ ಮಾಲೀಕರು ಮತ್ತು ಟ್ರಾನ್ಸ್‌ಪೋರ್ಟ್‌ ಏಜೆಂಟರ ಸಂಘ ಆರೋಪಿಸಿದೆ.

ಸಾರಿಗೆ ವಾಹನಗಳನ್ನು ಗಂಟೆಗಟ್ಟಲೆ ತಡೆದು ನಿಲ್ಲಿಸುವುದು. ಮೇಲಾಧಿಕಾರಿ ಸ್ಥಳದಲ್ಲೇ ಇದ್ದರೂ ಈತನೇ ಅಧಿಕಾರಿಯಂತೆ ವರ್ತಿಸುವ ಜೊತೆಗೆ ಬೆಂಗಳೂರಿನಿಂದ ಬರುವ ಮತ್ತು ಹೋಗುವ ಸಾರಿಗೆ ವಾಹನಗಳಿಗೆ ತೊಂದರೆ ಕೊಡುತ್ತಿದ್ದಾನೆ ಎಂದು ಸಂಘದ ಅಧ್ಯಕ್ಷ ಸೈಯದ್‌ ಸೈಫುಲ್ಲಾ ದೂರಿದ್ದಾರೆ.

error: Content is protected !!