ಆಟೋ ಡಿಕ್ಕಿ: ಹಣ್ಣಿನ ವ್ಯಾಪಾರಿ ಸಾವು

ದಾವಣಗೆರೆ, ಮಾ.3- ಪ್ರಯಾಣಿಕರ ಆಟೋ ಡಿಕ್ಕಿ ಹೊಡೆದು ತಳ್ಳುವ ಗಾಡಿ ಹಣ್ಣಿನ ವ್ಯಾಪಾರಿ ಮೃತಪಟ್ಟಿರುವ ಘಟನೆ ಇಲ್ಲಿನ ಕೆ.ಆರ್. ಮಾರ್ಕೆಟ್ ಹಳೇ ಗುಜರಿ ಲೈನ್ ರಸ್ತೆಯಲ್ಲಿ ಇಂದು ಬೆಳಗ್ಗೆ ನಡೆದಿದೆ.

ಮುಸ್ತಾಫ ನಗರದ ಅಬ್ದುಲ್ ಮುತುವಲ್ಲಿ (70) ಮೃತ ದುರ್ದೈವಿ.  ಅಬ್ದುಲ್ ಮುತುವಲ್ಲಿ ಹಣ್ಣುಗಳ ವ್ಯಾಪಾರವನ್ನು ಮಾಡುತ್ತಾ ರಸ್ತೆ ದಾಟುತ್ತಿದ್ದ ವೇಳೆ ಕೆ.ಆರ್. ಮಾರ್ಕೆಟ್ ರಸ್ತೆ ಕಡೆಯಿಂದ ಎಂ.ಜಿ. ರಸ್ತೆ ಕಡೆಗೆ ಸಾಗುತ್ತಿದ್ದ ಪ್ರಯಾಣಿಕರುಳ್ಳ ಆಟೋರಿಕ್ಷಾ ಡಿಕ್ಕಿಪಡಿಸಿದೆ. ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದ ಈತನನ್ನು ಸಿಜಿ ಆಸ್ಪತ್ರೆಗೆ ಚಿಕಿತ್ಸೆಗೆ ಕರೆದುಕೊಂಡು ಹೋಗುವಾಗ ಮಾರ್ಗ ಮಧ್ಯೆಯೇ ಮೃತಪಟ್ಟಿದ್ದಾರೆ.

error: Content is protected !!