ಕಳ್ಳನ ಬಂಧನ: 3 ಲಕ್ಷಕ್ಕೂ ಅಧಿಕ ಮೌಲ್ಯದ ಬಂಗಾರದ ಆಭರಣ ವಶ

ದಾವಣಗೆರೆ, ಫೆ.23- ಮಾಂಗಲ್ಯ ಸರ ಕಳವಿನ ಎರಡು ಪ್ರತ್ಯೇಕ ಪ್ರಕರಣಗಳಿಗೆ ಸಂಬಂಧಿಸಿದಂತೆ ಕಳ್ಳನ ಬಂಧಿಸಿರುವ ಪೊಲೀಸರು 77 ಗ್ರಾಂನ ಸುಮಾರು 3 ಲಕ್ಷದ 46 ಸಾವಿರ 500 ರೂ. ಮೌಲ್ಯದ ಬಂಗಾರದ ಆಭರಣ ವಶಪಡಿಸಿಕೊಂಡಿದ್ದಾರೆ.

ಬಳ್ಳಾರಿಯ ಹನುಮಂತ (22) ಬಂಧಿತ ಕಳ್ಳ. ಜನವರಿ 25,2021 ರಂದು ಬಸವರಾಜ ಹೆದ್.ಜಿ.ಎಮ್  ಎಂಬುವರ ಮನೆಯ ಕಿಟಕಿಯ ಮೂಲಕ ಅವರ ತಾಯಿಯ ಕೊರಳಲ್ಲಿದ್ದ 33 ಗ್ರಾಂನ ಬಂಗಾರದ ಮಾಂಗಲ್ಯ ಸರ ಹಾಗೂ ಮೋಬೈಲ್ ಅ‍ನ್ನು ಕಳ್ಳತನ ಮಾಡಲಾಗಿತ್ತು. ಈ ಸಂಬಂಧ ಕೆಟಿಜೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಎಸ್ಪಿ ಹನುಮಂತರಾಯ, ಎಎಸ್ಪಿ ಎಂ. ರಾಜೀವ್,  ನಗರ ಉಪ ವಿಭಾಗದ ಪೊಲೀಸ್ ಉಪಾಧೀಕ್ಷಕ ನಾಗೇಶ್ ಯು. ಐತಾಳ ಮತ್ತು ಕೇಂದ್ರ ವೃತ್ತ ನಿರೀಕ್ಷಕ ಗುರುಬಸವರಾಜ ಮಾರ್ಗದರ್ಶನದಲ್ಲಿ ಕೆಟಿಜೆ ನಗರ ಪೊಲೀಸ್ ಠಾಣೆಯ ಪಿಎಸ್ಐಗಳಾದ ಅಬ್ದುಲ್ ಖಾದರ್ ಜಿಲಾನಿ, ಆರ್. ವೀರೇಶ್, ಸಿಬ್ಬಂದಿಗಳಾದ  ಶಂಕರ್ ಜಾಧವ್, ಪ್ರಕಾಶ, ದಾದಾ ಖಲಂದರ್, ಮಂಜುನಾಥ, ಗಿರೀಶ,  ರಾಘವೇಂದ್ರ ಒಳಗೊಂಡ ತಂಡವು ತನಿಖೆ ಕೈಗೊಂಡು ಪ್ರಕರಣದಲ್ಲಿ ಕಳ್ಳತನವಾದ ಮೊಬೈಲ್‍ನ ಐಎಂಇಐ ನಂಬರ್ ನ ಸಿಡಿಆರ್ ಮಾಹಿತಿ ಆಧಾರದ ಮೇಲೆ ಆರೋಪಿಯನ್ನು ಸೆರೆ ಹಿಡಿದಿದೆ. 

ಬಂಧಿತನಿಂದ ಕೆಟಿಜೆ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಕಳ್ಳತನದ ಜೊತೆಗೆ ಬಳ್ಳಾರಿ ಜಿಲ್ಲೆಯ ಕೌಲ್ ಬಜಾರ್ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ 43 ಗ್ರಾಂ ಬಂಗಾರದ ಮಾಂಗಲ್ಯ ಸರ ಕಳ್ಳತನದ ಪ್ರಕರಣವನ್ನು ಬೇಧಿಸಲಾಗಿದೆ.

error: Content is protected !!