ಕೂಡ್ಲಿಗಿ : ರಸ್ತೆ ಅಪಘಾತದಲ್ಲಿ ಗಾಯ

ಕೂಡ್ಲಿಗಿ, ಫೆ. 17- ತಾಲ್ಲೂಕಿನ ಗುಡೇಕೋಟೆ ಕೂಡ್ಲಿಗಿ ರಸ್ತೆಯ ಹರವದಿ ಕ್ರಾಸ್ ಬಳಿ  ಕಾರುಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ, ಎರಡೂ ಕಾರಿನಲ್ಲಿದ್ದ ಆರು ಜನರಿಗೆ ಗಾಯಗಳಾಗಿರುವ ಘಟನೆ ನಡೆದಿದೆ.

ಧಾರವಾಡದ ಪ್ರಕಾಶ್, ಜಹಾಂಗೀರ್ ಮತ್ತು ಹೊಸಪೇಟೆಯ ವೆಂಕಟೇಶ್, ಶೃತಿ, ವಿರಾಟ್, ಜಯಮ್ಮ ಎಂಬುವವರಿಗೆ ಗಾಯಗಳಾಗಿದ್ದು, ಕೂಡ್ಲಿಗಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ವೆಂಕಟೇಶ ಎಂಬುವರ ವಿರುದ್ಧ ಧಾರವಾಡ ಪ್ರಕಾಶ ನೀಡಿದ ದೂರಿನಂತೆ ಗುಡೇಕೋಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

error: Content is protected !!