ವಿರುಪಾಪುರ ; ಲಾರಿ ಪಲ್ಟಿ : ದೂರು ದಾಖಲು

ಕೂಡ್ಲಿಗಿ, ಫೆ. 15- ಬಳ್ಳಾರಿ ಜಿಲ್ಲೆ ಕೂಡ್ಲಿಗಿ ತಾಲ್ಲೂಕು ವಿರುಪಾಪುರ ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿ 50ರಲ್ಲಿ ತಮಿಳುನಾಡಿನ ಸೇಲಂ ಜಿಲ್ಲೆಯ ಲಾರಿ ಪಲ್ಟಿಯಾಗಿದೆ. ಲಾರಿ ಜಖಂಗೊಂಡಿದ್ದು ಲಾರಿಯಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಈ ಕುರಿತು ಲಾರಿ ಮಾಲೀಕ ನೀಡಿದ ದೂರಿನನ್ವಯ, ಕೂಡ್ಲಿಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಲಾರಿ ಚಾಲಕ ತಮಿಳು ನಾಡು ಮೂಲದ ಚಿನ್ನಗುಂಡ ಗ್ರಾಮದ ಸೆಲ್ವಂ ಲಾರಿಯನ್ನು ಅತಿವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿರುವುದು ಘಟನೆಗೆ ಕಾರಣ ಎನ್ನಲಾಗಿದೆ. ಲಾರಿ ಮಾಲೀಕ ತಮಿಳುನಾಡಿನ ಸೇಲಂ ಜಿಲ್ಲೆಯ ಪಳೆಮಟ್ಟಿ ಗ್ರಾಮದ ಸುರೇಶ ನೀಡಿದ ದೂರಿನನ್ವಯ, ಕೂಡ್ಲಿಗಿ ಎಎಸ್ಐ ಎಂ. ರುದ್ರಮುನಿಯವರು ಪ್ರಕರಣ ದಾಖಲಿಸಿ ಕೊಂಡಿದ್ದಾರೆ.

error: Content is protected !!