ವಾಲ್ಮೀಕಿ ಜಾತ್ರೆಗೆ ಹೋಗಿದ್ದ ಬಸ್ ಡಿಕ್ಕಿ

ದಾವಣಗೆರೆ, ಫೆ.9- ಹರಿಹರದ ರಾಜನಹಳ್ಳಿಯಲ್ಲಿ ವಾಲ್ಮೀಕಿ ಜಾತ್ರೆಗೆ ಹೋಗಿದ್ದ ಬಸ್ಸೊಂದು ಅಪಘಾತವಾಗಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿಯಾಗದ ಘಟನೆ ಇಂದು ಸಂಜೆ ಸಂಭವಿಸಿದೆ.

ಶಾಮನೂರು ಬ್ರಿಡ್ಜ್ ಬಳಿ ವಾಲ್ಮೀಕಿ ಜಾತ್ರೆ ಮುಗಿಸಿ ವಾಪಸ್ಸಾಗುವಾಗ ಸಡನ್ ಬ್ರೇಕ್ ಹಾಕಿದ ಲಾರಿಗೆ ಹಿಂಬದಿಯಿಂದ ಬರುತ್ತಿದ್ದ ಬಸ್ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ. ಅಪಘಾತದಿಂದಾಗಿ ಜಾತ್ರೆಗೆ ಹೋಗಿ ಊರು ಕಡೆ ಸೇರುತ್ತಿದ್ದ ಜನರು ರಸ್ತೆಯ ಮೇಲೆ ನಿಲ್ಲುವಂತಾಯಿತು. ವಾಲ್ಮೀಕಿ ಜಾತ್ರೆ ಮುಗಿಸಿ ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲ್ಲೂಕಿನ ದೊಡ್ಡ ಉಳ್ಳಾರ್ತಿಗೆ ಕಡೆಗೆ ಬಸ್ ಹೋಗುತ್ತಿತ್ತು ಎಂದು ಹೇಳಲಾಗುತ್ತಿದೆ.

error: Content is protected !!