ಕೂಡ್ಲಿಗಿ : ರಸ್ತೆ ಅಪಘಾತದಲ್ಲಿ ಓರ್ವನ ಸಾವು

ಕೂಡ್ಲಿಗಿ, ಜ.24 – ಬೈಕು ಮತ್ತು ಕಾರು ಡಿಕ್ಕಿಯಾದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದು, ಸಹ ಸವಾರನಿಗೆ  ಗಂಭೀರ ಗಾಯಗಳಾಗಿ ಕೂಡ್ಲಿಗಿ ಆಸ್ಪತ್ರೆಗೆ ದಾಖಲಿಸಿ ಹೆಚ್ಚಿನ ಚಿಕಿತ್ಸೆಗೆ ಬಳ್ಳಾರಿ ವಿಮ್ಸ್‍ಗೆ ಕಳುಹಿಸಿದ ಘಟನೆ ಇಂದು ಬೆಳಿಗ್ಗೆ ಕೂಡ್ಲಿಗಿ ಹೊರವಲಯದ ರಾಜೀವ್‍ಗಾಂಧಿ ನಗರ ಸಮೀಪದ ರಾಷ್ಟ್ರೀಯ ಹೆದ್ದಾರಿ 50ರ ರಸ್ತೆಯಲ್ಲಿ ಜರುಗಿದೆ. ಅಪಘಾತದಲ್ಲಿ ಬೈಕ್ ಸವಾರ ಕೊಟ್ಟೂರಿನ ತೆಗ್ಗಿನಕೇರಿ ಕೊಟ್ರೇಶ್ (35) ಘಟನಾ ಸ್ಥಳದಲ್ಲೇ ಮೃತಪಟ್ಟರೆ ಸಹ ಸವಾರ ಕೊಟ್ಟೂರಿನ ದುರುಗೇಶ್ (29)   ಗಾಯಗಳಾಗಿವೆ.  ಘಟನಾ ಸ್ಥಳಕ್ಕೆ ಕೂಡ್ಲಿಗಿ ಡಿವೈಎಸ್ ಪಿ ಹರೀಶರೆಡ್ಡಿ, ಸಿಪಿಐ ವಸಂತ ವಿ ಅಸೋದೆ ಮತ್ತು ಕೂಡ್ಲಿಗಿ ಪಿಎಸ್ಐ ತಿಮ್ಮಣ್ಣ ಚಾಮನೂರ್ ಭೇಟಿ ನೀಡಿದ್ದರು.

error: Content is protected !!