ದಾವಣಗೆರೆ ಜ.6- ಅಂಗಡಿಯೊಂದಕ್ಕೆ ಕನ್ನ ಹಾಕಿರುವ ಕಳ್ಳರು, 4.19 ಲಕ್ಷ ರೂ. ಮೌಲ್ಯದ ಚಿನ್ನಾಭರಣ ದೋಚಿರುವ ಘಟನೆ ಆನಗೋಡು ಗ್ರಾಮದಲ್ಲಿ ಮೊನ್ನೆ ನಡೆದಿದೆ. ವೈ.ಎಸ್. ಟ್ರೇಡರ್ಸ್ ಹೆಸರಿನ ಪೇಂಟ್ ಅಂಗಡಿ ಯಲ್ಲಿ ಮಾಲೀಕ ಕೆ.ಎನ್. ಶಿವರಾಜ್ ಅವರು ತಮ್ಮ ತಾಯಿಯ ಒಡವೆಗಳನ್ನು ಅಂಗಡಿ ಡ್ರಾನಲ್ಲಿ ಟ್ಟಿದ್ದರು. ಅಂಗಡಿಗೆ ಬೀಗ ಹಾಕಿ ಮನೆಗೆ ತೆರಳಿದ್ದ ಸಂದರ್ಭದಲ್ಲಿ ಈ ಕೃತ್ಯ ನಡೆದಿದೆ.
July 24, 2024