ಲಾರಿ ಹರಿದು ದ್ವಿಚಕ್ರ ಸವಾರ ಸ್ಥಳದಲ್ಲೇ ಸಾವು

ಲಾರಿ ಹರಿದು ದ್ವಿಚಕ್ರ ಸವಾರ ಸ್ಥಳದಲ್ಲೇ ಸಾವು - Janathavaniದಾವಣಗೆರೆ, ಜ.5- ಸಿಗ್ನಲ್ ದಾಟು ತ್ತಿದ್ದ ವೇಳೆ ಲಾರಿ ಹರಿದ ಪರಿಣಾಮ ದ್ವಿಚಕ್ರ ವಾಹನ ಸವಾರ ನೋರ್ವ ಸ್ಥಳದಲ್ಲೇ ಧಾರುಣವಾಗಿ ಸಾವಿಗೀಡಾಗಿರುವ ಘಟನೆ ನಗರದ ಬಿಎಸ್ ಎನ್ ಎಲ್ ಕಚೇರಿ ಸಮೀಪದ ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿಂದು ಸಂಜೆ ಸಂಭವಿಸಿದೆ. 

ನಗರದ ಶಿವಕುಮಾರ ಸ್ವಾಮಿ ಬಡಾವಣೆಯ ಈರಣ್ಣ (67) ಮೃತಪಟ್ಟ ದುರ್ದೈವಿ. ವೃತ್ತದಲ್ಲಿ ಸಿಗ್ನಲ್ ದಾಟುವ ವೇಳೆ ಚಾಲಕನು ಲಾರಿಯನ್ನು ಅತೀ ವೇಗ, ಅಜಾಗ ರೂಕತೆಯಿಂದ ಚಾಲನೆ ಮಾಡುತ್ತಾ ನುಗ್ಗಿದ ಪರಿಣಾಮ ದ್ವಿಚಕ್ರ ವಾಹನಕ್ಕೆ ಡಿಕ್ಕಿಯಾಗಿದ್ದು, ನಂತರ ಕೆಳಗೆ ಬಿದ್ದ ದ್ವಿಚಕ್ರ ವಾಹನ ಸವಾರನ ತಲೆಯ ಮೇಲೆ ಹರಿದಿದೆ. 

ಅಪಘಾತಕ್ಕೆ ಕಾರಣನಾದ ಲಾರಿ ಚಾಲಕ ಲಾರಿ ಸಹಿತ ಪರಾರಿಯಾಗಲು ಯತ್ನಿಸಿದ್ದು, ತಕ್ಷಣವೇ ಕಾರ್ಯಪ್ರವೃತ್ತರಾದ ವಿದ್ಯಾನಗರ ಪೊಲೀಸರು ಬೆನ್ನು ಹತ್ತಿ ಚಾಲಕನನ್ನು ಲಾರಿ ಸಮೇತ ಬಂಧಿಸಿದ್ದಾರೆ. ಮೃತ ವ್ಯಕ್ತಿ ಬಗ್ಗೆ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದು, ಈ ಸಂಬಂಧ ದಾವಣಗೆರೆ ದಕ್ಷಿಣ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹೃದಯವಂತಿಕೆ ತೋರಿದ ಮುಖ್ಯ ಪೇದೆ: ಅಪಘಾತದಿಂದ ಸಾವನ್ನಪ್ಪಿದ ಸವಾರನ ಮೃತದೇಹ ಸಾಗಿಸಲು ಯಾರೂ ಮುಂದೆ ಬಾರದ ಕಾರಣ ರಸ್ತೆಯಲ್ಲೇ ಹಾಗೆ ಬಿದ್ದಿತ್ತು. ಈ ವೇಳೆ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಕರ್ತವ್ಯ ಮುಗಿಸಿ ಅದೇ ದಾರಿಯಲ್ಲಿ ಸಾಗುತ್ತಿದ್ದ ಡಿಆರ್ ನ ಹೆಡ್ ಕಾನ್ಸ್ ಟೇಬಲ್ ದುಗ್ಗೇಶ್ ಅವರು ಮೃತದೇಹವನ್ನು ರಸ್ತೆ ಮೇಲಿಂದ ಎತ್ತಿ ಸಾಗಿಸಲು ಮುಂದಾದ ನಂತರ ಅಂಬುಲೆನ್ಸ್ ನ ಓರ್ವ ಮತ್ತು ಕೆಲ ಸಾರ್ವಜನಿಕರು ಸಹ ಸಹಕಾರ ನೀಡಿದ್ದಾರೆ.

error: Content is protected !!