ಹರಪನಹಳ್ಳಿ : ಮತದಾನ ಜಾಗೃತಿ ಅಭಿಯಾನ

ಹರಪನಹಳ್ಳಿ : ಮತದಾನ ಜಾಗೃತಿ ಅಭಿಯಾನ

ಹರಪನಹಳ್ಳಿ, ಏ.1- ವಿಧಾನಸಭಾ ಚುನಾವಣೆ ನಿಮಿತ್ತ ಪಟ್ಟಣದ ಟಿಎಂಎಇ ಸಂಸ್ಥೆಯ ಕಟ್ಟಿ ಸೇತುರಾಮಾಚಾರ್ ಶಿಕ್ಷಣ ಮಹಾವಿದ್ಯಾಲಯದ ಪ್ರ-ಶಿಕ್ಷಣಾರ್ಥಿಗಳು ಹಾಗೂ ಸಿಬ್ಬಂದಿ ಮತದಾನ ಕುರಿತು ಪಟ್ಟಣದಲ್ಲಿ ಜಾಗೃತಿ ಅಭಿಯಾನ ನಡೆಸಿದರು.

ಪಟ್ಟಣದ ಪ್ರವಾಸಿ ಮಂದಿರ ವೃತ್ತದಿಂದ ಪ್ರ-ಶಿಕ್ಷಣಾರ್ಥಿಗಳು ಜಾಗೃತಿ ಮೂಡಿಸುವ ಭಿತ್ತಿ ಪತ್ರಗಳನ್ನು ಹಿಡಿದು, ಇಜಾರಿ ಶಿರಸಪ್ಪ ವೃತ್ತದವರೆಗೆ ಕಾಲ್ನಡಿಗೆ ಮೂಲಕ ತೆರಳಿ ಮತದಾನದ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದರು.

ಜಾಗೃತಿ ಅಭಿಯಾನ ಕಾರ್ಯಕ್ರಮಕ್ಕೆ ಉಪವಿ ಭಾಗಾಧಿಕಾರಿ ಟಿ.ವಿ.ಪ್ರಕಾಶ್ ಚಾಲನೆ ನೀಡಿದರು. ಟಿಎಂಎಇ ಬಿಇಡಿ ಕಾಲೇಜ್‍ನ  ಪ್ರಾಚಾರ್ಯ ಟಿ.ಎಂ.ರಾಜಶೇಖರಯ್ಯ, ಉಪಪ್ರಾಚಾರ್ಯ ಸಿ.ಎಂ.ವೀರೇಶ್,  ಉಪನ್ಯಾಸಕರಾದ ಟಿ.ಎಸ್.ಗಿರೀಶ್,  ಮರಳುಸಿದ್ದಪ್ಪ, ರಾಮಕೃಷ್ಣಂ, ರಾಜು ಸೇರಿದಂತೆ, ವಿದ್ಯಾರ್ಥಿಗಳು ಇದ್ದರು.

error: Content is protected !!