ಅಭಿವೃದ್ದಿ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿದ ಶಾಸಕ ಕರುಣಾಕರರೆಡ್ಡಿ

ಅಭಿವೃದ್ದಿ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿದ ಶಾಸಕ ಕರುಣಾಕರರೆಡ್ಡಿ

ಹರಪನಹಳ್ಳಿ, ಮಾ.18- ತಾಲ್ಲೂಕಿನ ಯಲ್ಲಾಪುರ, ಶಿವಪುರ, ಕಂಡಿಕೇರಿ ತಾಂಡಾ, ತೆಲಿಗಿ ಹಾಗೂ ಪಟ್ಟಣ ಸೇರಿದಂತೆ ವಿವಿಧ ಕಾಮಗಾರಿಗಳಿಗೆ ಶಾಸಕ ಜಿ.ಕರುಣಾಕರ ರೆಡ್ಡಿ ಶನಿವಾರ ಭೂಮಿ ಪೂಜೆ ನೇರವೇರಿಸಿದರು.

ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಕಾಂಪೌಂಡ್ ಕಾಮಗಾರಿಗೆ ಭೂಮಿ ಪೂಜೆ ಸಲ್ಲಿಸಿ, ಬಳಿಕ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳೊಂದಿಗೆ ಕಾಲೇಜಿನ ಕಾಂಪೌಂಡ್ ನಿರ್ಮಾಣ ಕುರಿತು ಮತ್ತು ಸುತ್ತ ಮುತ್ತಲಿನ ಜನರಿಗೆ ತೊಂದರೆಯಾಗದಂತೆ ಕ್ರಮವಹಿಸಲು ಅಧಿಕಾರಿಗಳಿಗೆ ಸೂಚಿಸಿದರು.

ನಂತರ ತಾಲ್ಲೂಕಿನ ಯಲ್ಲಾಪುರ ಗ್ರಾಮದ ಸಿ.ಸಿ.ರಸ್ತೆ, ಶಿವಪುರ ಗ್ರಾಮದಲ್ಲಿ ರಸ್ತೆ ಕಾಮಗಾರಿ, ಕಂಡಿಕೇರಿ ಗ್ರಾಮದಲ್ಲಿ ಕುಡಿಯುವ ನೀರಿನ ಘಟಕಕ್ಕೆ ಚಾಲನೆ ಹಾಗೂ ತೆಲಿಗಿ ಗ್ರಾಮದಲ್ಲಿ ಗ್ರಾಮ ಪಂಚಾಯಿತಿಯ ನೂತನ ಕಟ್ಟಡಕ್ಕೆ ಭೂಮಿಪೂಜೆ ನೇರವೇರಿಸಿದರು. ಸಂಜೆ 5ಕ್ಕೆ ಪಟ್ಟಣದ ವಾಲ್ಮೀಕಿ ಸಮುದಾಯ ಭವನದ ಮುಂದುವರೆದ ಕಾಮಗಾರಿ ಹಾಗೂ ಸಮುದಾಯ ಭವನದ ಸುತ್ತಲೂ ಕಾಂಪೌಂಡ್ ಗೋಡೆ ಸೇರಿ ಒಟ್ಟು 3 ಕೋಟಿ ರೂ. ವೆಚ್ಚದ ಕಾಮಗಾರಿಗೆ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷ ಹೆಚ್.ಎಂ.ಅಶೋಕ್, ಸದಸ್ಯರಾದ ಎಂ.ಕೆ.ಜಾವೀದ್, ಡಿ.ರೊಕ್ಕಪ್ಪ, ಕಿರಣ್, ರಾಘವೇಂದ್ರಶೆಟ್ಟಿ, ಮುಖಂಡರಾದ ಬಾಗಳಿ ಕೋಟ್ರೆಶಪ್ಪ, ಕೆಂಗಳ್ಳಿ ಪ್ರಕಾಶ್, ಆರ್.ಲೋಕೇಶ್, ಶಿವಾನಂದ ದಾದಾಪುರ, ಎಂ.ಮಲ್ಲೇಶ್, ಪಿಡಬ್ಲ್ಯೂಡಿ ಎಇಇ ಸತೀಶ್ ಪಾಟೀಲ್, ಎಇ ಕುಬೇಂದ್ರನಾಯ್ಕ, ಗುತ್ತಿಗೆದಾರರಾದ ಸಿದ್ದಾರ್ಥ, ಎಲ್.ಜಿ.ಹೊನ್ನಪ್ಪ, ಗಿರಜ್ಜಿ ನಾಗರಾಜ್‌, ಮಂಜು ನಾಥ್‌, ಸುರೇಶ್, ಅಶೋಕ್‌, ಡಿ.ಆನಂದ್‌,  ನೀಲಗುಂದ ತಿಮ್ಮೇಶ್, ರವಿಕುಮಾರ್‌, ಮಲ್ಲೇಶ್‌ ಸೇರಿದಂತೆ ಇತರರು ಇದ್ದರು.

error: Content is protected !!