ವಿಕಲಚೇತನ ಕ್ರೀಡಾಪಟು ರೂಪ ನೆರವು ನೀಡಿ

ವಿಕಲಚೇತನ ಕ್ರೀಡಾಪಟು ರೂಪ ನೆರವು ನೀಡಿ

ಹರಿಹರ, ಫೆ. 22 – ನಗರದ ವಿಕಲಚೇತನ ಕ್ರೀಡಾಪಟು ಎನ್.ರೂಪ ಇವರು ಸಿಟ್ಟಿಂಗ್ ವಾಲಿಬಾಲ್ ಕ್ರೀಡೆಯಲ್ಲಿ ರಾಜ್ಯಮಟ್ಟದ ಪ್ರಶಸ್ತಿಯನ್ನು ಪಡೆದು ಅಂತರರಾಷ್ಟ್ರೀಯ ಮಟ್ಟಕ್ಕೆ ಅಯ್ಕೆಯಾಗಿದ್ದಾರೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾಗವಹಿಸಲು ಹಣದ ಅಡಚಣೆ ಉಂಟಾಗಿರುವ ನಿಟ್ಟಿನಲ್ಲಿ, ನಗರದ ಕರ್ನಾಟಕ ರಕ್ಷಣಾ ವೇದಿಕೆಯ (ಪ್ರವೀಣ್ ಶಟ್ಟಿ ಬಣ)  ವತಿಯಿಂದ 10 ಸಾವಿರ ರೂಪಾಯಿ ಆರ್ಥಿಕ ಸಹಕಾರ ಮಾಡಿದ್ದಾರೆ ಎಂದು ರಕ್ಷಣಾ ವೇದಿಕೆಯ ಮುಖಂಡ ಪ್ರೀತಂ ಬಾಬು ತಿಳಿಸಿದರು.

ನಗರದ ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.‌ ಎನ್. ರೂಪ ಅವರು ಒಬ್ಬ ಪ್ರತಿಭಾವಂತ ವಿಕಲಚೇತನ ಕ್ರೀಡಾಪಟು. ಇವರು ಮುಂದಿನ ದಿನಗಳಲ್ಲಿ ಕಜಕಿಸ್ತಾನದಲ್ಲಿ ನಡೆಯಲಿರುವ ಏಷಿಯಾ ವಲಯದ ಚಾಂಪಿಯನ್‌ಶಿಪ್‌ನಲ್ಲಿ ಪಾಲ್ಗೊಳ್ಳಲಿದ್ದಾರೆ. ಇವರಿಗೆ ಇನ್ನಷ್ಟು ಪ್ರೋತ್ಸಾಹದ ಅಗತ್ಯವಿದೆ ಎಂದರು.

ಈ ಸಂದರ್ಭದಲ್ಲಿ ರಕ್ಷಣಾ ವೇದಿಕೆಯ ರಮೇಶ್ ಮಾನೆ, ರೂಪ ಎನ್., ಶಂಕರ್ ಮತ್ತಿತರರು ಹಾಜರಿದ್ದರು.

error: Content is protected !!