ಸಚಿವ ಅಶ್ವತ್ಥ್ ನಾರಾಯಣ್ ವಿರುದ್ಧ ಕುರುಬ ಸಮಾಜದಿಂದ ಪ್ರತಿಭಟನೆ

ಸಚಿವ ಅಶ್ವತ್ಥ್ ನಾರಾಯಣ್ ವಿರುದ್ಧ ಕುರುಬ ಸಮಾಜದಿಂದ ಪ್ರತಿಭಟನೆ

ಹೊನ್ನಾಳಿ, ಫೆ.21- ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಅವಹೇಳನ ಕಾರಿ ಹೇಳಿಕೆ ನೀಡಿರುವ ಉನ್ನತ ಶಿಕ್ಷಣ ಸಚಿವ  ಸಿ.ಎನ್. ಅಶ್ವತ್ಥ್ ನಾರಾಯಣ್ ವಿರುದ್ಧ  ಇಲ್ಲಿನ ಕುರುಬ ಸಮಾಜದ ಮುಖಂಡರು  ಪ್ರತಿಭಟನಾ ಮೆರವಣಿಗೆ ನಡೆಸಿ ದರು. ಬಸವೇಶ್ವರ ಟಾಕೀಸ್‍ನಿಂದ ಪ್ರಾರಂಭವಾದ ಮೆರವಣಿಗೆ  ವೀರ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಸೇರಿ ಸಚಿವರ ವಿರುದ್ಧ ಘೋಷಣೆ ಕೂಗಿದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್.ಬಿ.ಮಂಜಪ್ಪ ಮಾತನಾಡಿ,   ತಾವೊಬ್ಬ ಜವಾಬ್ದಾರಿಯುತ ಸ್ಥಾನದಲ್ಲಿರುವ ವ್ಯಕ್ತಿ ಎಂಬುದನ್ನು ಮರೆತು, ಪ್ರತಿಪಕ್ಷ ನಾಯಕರಾದ ಸಿದ್ದರಾಮಯ್ಯ ಅವರನ್ನು ಟಿಪ್ಪು ಸುಲ್ತಾನ್ ರೀತಿಯಲ್ಲಿ ಹೊಡೆದುರುಳಿಸ ಬೇಕೆಂದು ವಿವಾದಾತ್ಮಕ ಹೇಳಿಕೆ ನೀಡಿರುವುದು ಅಕ್ಷಮ್ಯ ಅಪರಾಧವೆಂದು ಕಿಡಿ ಕಾರಿದರು.

ಕಿಸಾನ್ ಸೆಲ್ ಅಧ್ಯಕ್ಷ ಎಚ್.ನರಸಪ್ಪ, ಸಮಾಜದ ಕಾರ್ಯಾಧ್ಯಕ್ಷ ಧರ್ಮಪ್ಪ ಮಾತನಾಡಿದರು. 

ಕುರುಬ ಸಮಾಜದ ಉಪಾಧ್ಯಕ್ಷ ಕೆ.ಪುಟ್ಟಪ್ಪ, ಎಚ್.ಎ.ಧರ್ಮಪ್ಪ, ಪ.ಪಂ ಸದಸ್ಯರಾದ ಹೆಚ್.ಡಿ.ವಿಜೇಂದ್ರಪ್ಪ, ರಾಜೇಂದ್ರ, ಮಾಜಿ ಸದಸ್ಯ ಎಚ್.ಬಿ.ಅಣ್ಣಪ್ಪ, ಎಪಿಎಂಸಿ ಮಾಜಿ ಅಧ್ಯಕ್ಷ ಎ.ಜಿ.ಪ್ರಕಾಶ್, ಮುಖಂಡರುಗಳಾದ ಸರಳಿನಮನೆ ರಾಜಪ್ಪ, ಮಟ್ಟಿ ನರಸಿಂಹಪ್ಪ, ಬೂದೇಶ್, ಬಿ.ಕೆ.ಮಾದಪ್ಪ, ಬೆಂಕಿ ಚಂದ್ರು, ನಾಗರಾಜ್ ಕುಳಗಟ್ಟೆ, ಎಂ.ಎಸ್.ಮುಂಜುನಾಥ್, ಸೋಮಶೇಖರ್, ಚಮನ್ ಸಾಬ್, ಇಫ್ತಿಕಾರ್ ಅಹ್ಮದ್, ಬೇವಿನಹಳ್ಳಿ ನಾಗರಾಜ್, ಕಿಸಾನ್ ಸೆಲ್‍ನ ಸೊರಟೂರು ಹನು ಮಂತಪ್ಪ, ಕೋಟೆಮಲ್ಲೂರು ಮಹೇಶ್ವರಪ್ಪ, ಬೇಲಿ ಮಲ್ಲೂರು ಮಂಜಪ್ಪ ಮತ್ತಿತರರು ಉಪಸ್ಥಿತರಿದ್ದರು.

error: Content is protected !!