ಮಲೇಬೆನ್ನೂರು, ಫೆ.19- ಕುಂಬಳೂರು ಸಮೀಪದ ಎಸ್.ಹೆಚ್.ರಸ್ತೆಯಿಂದ ವಿನಾಯಕ ನಗರ ಕ್ಯಾಂಪ್ ಸಂಪರ್ಕಿಸುವ 2 ಕಿ.ಮೀ ರಸ್ತೆ ಗುಂಡಿಗಳಿಂದಾಗಿ ವಾಹನಗಳ ಸಂಚಾರಕ್ಕೆ ತೀವ್ರ ತೊಂದರೆ ಆಗಿತ್ತು. ರಸ್ತೆ ಹದಗೆಟ್ಟಿರುವ ಕಾರಣದಿಂದಾಗಿ ಶಾಲಾ ಬಸ್ಗಳೂ ಸಹ ಕ್ಯಾಂಪಿಗೆ ಬರುವುದನ್ನು ನಿಲ್ಲಿಸಿದ್ದವು. ಇದರಿಂದ ಬೇಸತ್ತ ಕ್ಯಾಂಪಿನ ಯುವಕರೆಲ್ಲರೂ ಸೇರಿ ಜನಪ್ರತಿನಿಧಿಗಳ ನಿರ್ಲಕ್ಷ್ಯ ಖಂಡಿಸಿ, ಸ್ವಂತ ಹಣದಲ್ಲಿ ಜೆಸಿಬಿ ಮೂಲಕ ರಸ್ತೆಯ ಗುಂಡಿಗಳನ್ನು ಮುಚ್ಚಿಸಿದ ಘಟನೆ ಭಾನುವಾರ ನಡೆದಿದೆ. ರಸ್ತೆ ಅಭಿವೃದ್ಧಿ ಪಡಿಸುವಂತೆ ಶಾಸಕರಿಗೆ, ಸಂಸದರಿಗೆ ಸಾಕಷ್ಟು ಬಾರಿ ಮನವಿ ಮಾಡಿದರೂ ಸ್ಪಂದಿಸಿಲ್ಲ ಎಂದು ಗ್ರಾ.ಪಂ. ಸದಸ್ಯ ಶ್ರೀನಿವಾಸ್ ಬೇಸರ ವ್ಯಕ್ತಪಡಿಸಿದರು.
ವಿನಾಯಕನಗರ ಕ್ಯಾಂಪ್ : ರಸ್ತೆ ದುರಸ್ತಿಗೊಳಿಸಿದ ಯುವಕರು
![21 vinaykanagara20.02.2023 ವಿನಾಯಕನಗರ ಕ್ಯಾಂಪ್ : ರಸ್ತೆ ದುರಸ್ತಿಗೊಳಿಸಿದ ಯುವಕರು](https://janathavani.com/wp-content/uploads/2023/02/21-vinaykanagara20.02.2023.jpg)