ಕೊಂಡಜ್ಜಿಯಲ್ಲಿ ಪಂಚರತ್ನ ರಥ ಯಾತ್ರೆಗೆ ಭವ್ಯ ಸ್ವಾಗತ

ಕೊಂಡಜ್ಜಿಯಲ್ಲಿ ಪಂಚರತ್ನ  ರಥ ಯಾತ್ರೆಗೆ ಭವ್ಯ ಸ್ವಾಗತ

ಹರಿಹರ, ಜ.31- ತಾಲ್ಲೂಕಿನ ಕೊಂಡಜ್ಜಿಗೆ ಆಗಮಿಸಿದ ಜೆಡಿಎಸ್‌ನ ಪಂಚರತ್ನ ರಥ ಯಾತ್ರೆಯನ್ನು ಭರ್ಜರಿಯಾಗಿ ಸ್ವಾಗತಿಸಲಾಯಿತು.

ಕಳೆದ 50 ದಿನಗಳಿಂದ ರಾಜ್ಯಾದ್ಯಂತ ಸಂಚರಿಸುತ್ತಿರುವ ಜೆಡಿಎಸ್‍ನ ಪಂಚರತ್ನ ರಥ ಯಾತ್ರೆ ಇಂದು ಸಂಜೆ 5 ಗಂಟೆಗೆ ಹಗರಿಬೊಮ್ಮನಹಳ್ಳಿ ಯಿಂದ ಹರಿಹರ ವಿಧಾನ ಸಭಾ ಕ್ಷೇತ್ರಕ್ಕೆ, ತಾಲೂಕಿನ ಕೊಂಡಜ್ಜಿ ಗ್ರಾಮದಿಂದ ಆಗಮಿಸಿತು.

ಮಾಜಿ ಶಾಸಕ ಹೆಚ್.ಎಸ್.ಶಿವಶಂಕರ್‌ ಹಾಗೂ ಪಕ್ಷದ ಕಾರ್ಯಕರ್ತರು ರಥಯಾತ್ರೆ ಯನ್ನು ಭವ್ಯವಾಗಿ ಸ್ವಾಗತಿಸಿದರು. ಮೆರವಣಿಗೆ ಯಲ್ಲಿ ಭಾಗವಹಿಸಿದ್ದ ಪಕ್ಷದ ಕಾರ್ಯಕರ್ತರ, ಅಭಿಮಾನಿಗಳ ಹರ್ಷೋದ್ಘಾರ ಮುಗಿಲು ಮುಟ್ಟುವಂತಿತ್ತು. ಜೆಸಿಬಿ ಮೂಲಕ ಪುಷ್ಪವೃಷ್ಠಿ ಮಾಡಿ, ಪಟಾಕಿ ಸಿಡಿಸಿದರು.

ಮಾಜಿ ಮುಖ್ಯ ಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರನ್ನು ಬೃಹತ್ ಮೆರವಣಿಗೆಯ ಮೂಲಕ, ಕೊಂಡಜ್ಜಿ ಗ್ರಾಮ ದಲ್ಲಿ ಏರ್ಪಡಿಸಿದ್ದ ಬೃಹತ್ ಬಹಿರಂಗ ಸಭೆ ನಡೆಯುವ ಸ್ಥಳದವರೆಗೆ ಕರೆದೊಯ್ಯಲಾಯಿತು.

ರಥಯಾತ್ರೆಯು ಕೊಂಡಜ್ಜಿಯಿಂದ ಕರ್ಲಹಳ್ಳಿ, ಗುತ್ತೂರು ಮಾರ್ಗವಾಗಿ ನಗರದಲ್ಲಿ ಹಾದು ಬನ್ನಿಕೊಡು ಗ್ರಾಮವನ್ನು ತಲುಪಿ ಅಲ್ಲಿ ಗ್ರಾಮ ವಾಸ್ತವ್ಯ ಮಾಡಲಿದೆ.

ಜಿಲ್ಲಾ ಅಧ್ಯಕ್ಷ ಬಿ.ಚಿದಾನಂದಪ್ಪ, ತಾಲ್ಲೂಕು ಅಲ್ಪ ಸಂಖ್ಯಾತರ ಅಧ್ಯಕ್ಷ ಕೆ.ಕೆ ಮನ್ಸೂರ್, ಹಿಂದುಳಿದ ಘಟಕಗಳ ಅಧ್ಯಕ್ಷ ಅಶೋಕ ಕೆ.ಎನ್.ಹಳ್ಳಿ, ಯುವ ಘಟಕದ ಅಧ್ಯಕ್ಷ ಅಡಿಕಿ ಪ್ರೇಮ್ ಕುಮಾರ, ನಗರಸಭೆ ಉಪಾಧ್ಯಕ್ಷ ನ್ಯಾಯವಾದಿ ವಾಮನಮೂರ್ತಿ, ಸದಸ್ಯರಾದ ಆರ್.ಸಿ ಜಾವಿದ್, ಪೈ ಸುರೇಶ್‌, ದಿನೇಶ್‌ಬಾಬು, ಅಲ್ತಾಫ್‌, ಮುಖಂಡರುಗಳಾದ ಮಡಿವಾಳ ಮಹದೇವಪ್ಪ, ಲಕ್ಕಶೆಟ್ಟಿಹಳ್ಳಿ ನಾಗರಾಜ ಕೆ, ನಿಡಗಲ್ ನಾರಾಯಣ, ದೊಡ್ಡಗೌಡ್ರ ನಂಜಪ್ಪ ಇತರರು ಈ ಸಂದರ್ಭದಲ್ಲಿದ್ದರು.

error: Content is protected !!