ಭೂ ಸುಧಾರಣಾ ಕಾಯ್ದೆ : ಪ್ರತಿಭಟನೆ

ಮಲೇಬೆನ್ನೂರು, ಸೆ. 28- ರೈತ ವಿರೋಧಿ ಹಾಗೂ ಕಾರ್ಪೊರೇಟ್ ಕಂಪನಿಗಳ ಪರವಾದ ಭೂ ಸುಧಾರಣಾ ಕಾಯ್ದೆ ವಿರೋಧಿಸಿ ಮಲೇಬೆನ್ನೂರಿನಲ್ಲಿ ಸೋಮವಾರ ರಾಜ್ಯ ರೈತ ಸಂಘ  ಮತ್ತು ಹಸಿರು ಸೇನೆ ವತಿಯಿಂದ ಪ್ರತಿಭಟನೆ ನಡೆಸಲಾಯಿತು.

ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ನಿರ್ಧಾರವನ್ನು ವಿರೋಧಿಸಿ, ಪಟ್ಟಣದ ಪ್ರಮುಖ ರಸ್ತೆಯಲ್ಲಿ ಪ್ರತಿಭಟನೆ ನಡೆಸಿದ ರೈತ ಸಂಘದವರು ನಂತರ ನಾಡ ಕಛೇರಿಗೆ ತೆರಳಿ ಉಪ ತಹಶೀಲ್ದಾರ್ ಆರ್. ರವಿ ಅವರಿಗೆ ಮನವಿ ಸಲ್ಲಿಸಿದರು.

ರೈತ ಸಂಘದ ಮಂಜುನಾಥ್ ಕೋಗಳಿ, ಗೌತಮ್ ರಾಜ್ ಕರಡೆಪ್ಪರ, ಚಂದ್ರಶೇಖರ್ ಹಣಚಿಕ್ಕಿ, ಪಿ. ಗಂಗಾಧರಪ್ಪ ಪೂಜಾರ್, ಹೆಚ್.ಆರ್.
ಮಂಜುನಾಥ ರೆಡ್ಡಿ ಮತ್ತಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

error: Content is protected !!