ಪತ್ರಿಕಾ ವಿತರಕ ಶಿವಕುಮಾರ್‌ ಅವರ ಕುಟುಂಬಕ್ಕೆ ಸಹಾಯ

ದಾವಣಗೆರೆ, ಸೆ.28- ಇತ್ತೀಚೆಗೆ ನಿಧನರಾದ ಚಿತ್ರದುರ್ಗದ ಪತ್ರಿಕಾ ವಿತರಕ ಹೆಚ್.ವಿ.ಶಿವಕುಮಾರ್ ಅವರ ಸ್ವಗೃಹಕ್ಕೆ ದಾವಣಗೆರೆ ಹಾಗೂ ಶಿವಮೊಗ್ಗ ಜಿಲ್ಲೆಗಳ ಪತ್ರಿಕಾ ವಿತರಕರು ತೆರಳಿ ಅವರ ಕುಟುಂಬಕ್ಕೆ ಸಾಂತ್ವನ ಹೇಳಿ, ಪತ್ರಿಕಾ ವಿತರಕರಿದ ಸಂಗ್ರಹಿಸಿದ ಹಣವನ್ನು ಅವರ ಕುಟುಂಬಕ್ಕೆ ನೀಡಿದರು. 

ಈ ಸಂದರ್ಭದಲ್ಲಿ ದಾವಣ ಗೆರೆಯ ಹಿರಿಯ ಪತ್ರಿಕಾ ವಿತರಕ ಎ.ಎನ್.ಕೃಷ್ಣಮೂರ್ತಿ, ಶಿವಮೊಗ್ಗದ ಸತ್ಯನಾರಾಯಣ್, ಧನಂಜಯ ಹೆಚ್. (ಅರುಣ್), ಮಂಜುನಾಥ್, ಬಿ.ರಾಕೇಶ್, ನಾಗೇಂದ್ರ, ಚಿತ್ರದುರ್ಗದ ಪತ್ರಿಕಾ ವಿತರಕರ ಸಂಘದ ಅಧ್ಯಕ್ಷ ತಿಪ್ಪೇಸ್ವಾಮಿ, ನಾಗರಾಜ್ ಮತ್ತಿತರರು ಉಪಸ್ಥಿತರಿದ್ದರು.

error: Content is protected !!